Sunday, September 8, 2024

Latest Posts

ಟೈಲ್ಸ್ ಕೆಲಸಗಾರ ಹರೀಶ್ ಕೊ*ಲೆ ಪ್ರಕರಣ: ಆರೋಪಿಗಳು ಅರೆಸ್ಟ್

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಟೈಲ್ಸ್ ಮೇಸ್ತ್ರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ದಿನಗಳ ಹಿಂದೆ ಹರೀಶ್ ಶಿಂಧೆ ಎಂಬ ಯುವಕನ ಕೊಲೆ ನಡೆದಿತ್ತು. ಧಾರವಾಡ ತಾಲೂಕಿನ ಗೋವನಕೊಪ್ಪ ಬಳಿ ಈ ಘಟನೆ ನಡೆದಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರು ಹರೀಶ್‌ನ ಸ್ನೇಹಿತರೇ ಆಗಿದ್ದಾರೆ. ಸರ್ಫರಾಜ್ ನವಲೂರ, ಶಾಹೀಲ್ ಬಂಧಿತ ಆರೋಪಿಗಳಾಗಿದ್ದು, ಇಬ್ಬರಿಗೂ ಹರೀಶ್ ಸಾಲ ಕೊಟ್ಟಿದ್ದ.

ಈ ಆರೋಪಿಗಳು ಕೂಡ ಟೈಲ್ಸ್ ಕೆಲಸವನ್ನೇ ಮಾಡುತ್ತಿದ್ದರು. ಆದರೆ ಸರಿಯಾಗಿ ದುಡ್ಡು ಸಿಗದೇ, ಕಂಗಾಲಾಗಿದ್ದ ಇವರಿಬ್ಬರಿಗೂ ಹರೀಶ್ ಸಾಲ ನೀಡಿದ್ದ. ಆದರೆ ಹರೀಶ್‌ಗೆ ದುಡ್ಡಿನ ತಾಪತ್ರಯ ಶುರುವಾದ ಸಂದರ್ಭದಲ್ಲಿ ಹರೀಶ್, ಸರ್ಫರಾಜ್, ಶಾಹೀಲ್ ಬಳಿ, ಕೊಟ್ಟ ಸಾಲ ಮರಳಿ ಕೊಡುವಂತೆ ಕೇಳಿದ್ದ.

ಕೊಟ್ಟ ಸಾಲ ಸರಿಯಾದ ಸಮಯಕ್ಕೆ ಬರದಿದ್ದಾಗ, ಹರೀಶ್ ಸರ್ಫರಾಜ್ ಮತ್ತು ಶಾಹಿಲ್‌ಗೆ ಅವಾಚ್ಯವಾಗಿ ನಿಂದಿಸಿದ್ದ. ಈ ಹಿನ್ನೆಲೆ ಕೋಪಗೊಂಡ ಆರೋಪಿಗಳು, ಹರೀಶ್‌ನನ್ನು ಪಾರ್ಟಿಗೆ ಬಾ ಎಂದು ಕರೆದೊಯ್ದು, ಗೋವನಕೊಪ್ಪ ಬಳಿಯ ಜಮೀನಿನಲ್ಲಿ ಪಾರ್ಟಿ ಮಾಡಿದ್ದಾರೆ. ಆದರೆ ಮುಂಚೆಯೇ ಪ್ಲಾನ್ ಮಾಡಿದಂತೆ, ಪಾರ್ಟಿ ಮಧ್ಯೆ ಚಾಕುವಿನಿಂದ ಇರಿದು ಹರೀಶ್ ಕೊಲೆ ಮಾಡಿದ್ದಾರೆ. ಬಳಿಕ ಎಸ್ಕೇಪ್ ಆಗಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣವೂ ದಾಖಲಾಗಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

- Advertisement -

Latest Posts

Don't Miss