- Advertisement -
Chamarajanagara News : ಟೊಮ್ಯಾಟೋಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಳೆ ಇರುವ ಕಾರಣ ಚಾಮರಾಜನಗರದ ಕೆಬ್ಬೇಪುರ ಗ್ರಾಮದಲ್ಲಿ ರೈತ ಮಂಜುನಾಥ್ ತನ್ನ ಒಂದುವರೆ ಎಕರೆ ಜಮೀನಿನಲ್ಲಿ ಟೊಮ್ಯಾಟೋ ಬೆಳೆ ಹಾಕಿದ್ದರು.
ತನ್ನ ಅಕ್ಕನ ಬಳಿ ಚಿನ್ನಾಭರಣ ಪಡೆದು ಬ್ಯಾಂಕ್ ನಲ್ಲಿ ಅಡವಿಟ್ಟು ಜೊತೆಗೆ ಕೈ ಸಾಲ ಮಾಡಿಕೊಂಡು ಬೆಳೆ ಹಾಕಿದ್ರು ಇನ್ನೇನು ಬೆಳೆ ಕೈಗೆ ಬಂತು ಮಾಡಿದ್ದ ಸಾಲವನ್ನ ತೀರಿಸಬಹುದೆಂಬ ಆಸೆಯಲ್ಲಿ ಇದ್ರು. ಆದ್ರೆ ರಾತ್ರೋ ರಾತ್ರಿ ಜಮೀನಿಗೆ ನುಗ್ಗಿದ ಅಪರಿಚಿತ ವ್ಯಕ್ತಿಗಳು ಒಂದುವರೆ ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆಯನ್ನ ಬೇರು ಸಮೇತ ಕಿತ್ತಾಕಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಬೇಗೂರು ಠಾಣೆ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಶ್ವಾನ ದಳವನ್ನ ತಂದು ಕೃತ್ಯ ನಡೆದ ಸ್ಥಳದ ಪರಿಶೀಲನೆ ನಡೆಸಿದ್ದಾರೆ.
- Advertisement -

