Friday, October 18, 2024

Latest Posts

ಚಲಿಸುತ್ತಿದ್ದ ರೈಲಿನಿಂದ ಸೈನಿಕನನ್ನು ತಳ್ಳಿದ ಟಿಟಿಇ

- Advertisement -

ಪ್ರಯಾಣ ಟಿಕೆಟ್ ಪರೀಕ್ಷಕರೊಬ್ಬರು ಚಲಿಸುತ್ತಿದ್ದ ರಾಜಧಾನಿ ಎಕ್ಷ್ ಪ್ರೆಸ್ ರೈಲಿನಿಂದ ಸೈನಿಕನನ್ನು ತಳ್ಳಿದ್ದಾರೆ. ಈ ಘಟನೆಯಲ್ಲಿ ರಜಪೂತ್ ರೈಫಲ್ಸ್ ಗೆ ಸೇರಿದ ಸೈನಿಕ ಸೋನುಕುಮಾರ್ ಸಿಂಗ್ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆ ನಂತರ ರೈಲಿನಲ್ಲಿದ್ದ ಸಹ ಸೈನಿಕರು ಟಿಟಿಇಯನ್ನು ಥಳಿಸಿದ್ದಾರೆ. ಸೈನಿಕ ಸೋನುಕುಮಾರ್ ಬರೇಲಿ ರೈಲು ನಿಲ್ದಾಣದಲ್ಲಿ ರೈಲು ಹತ್ತುವಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ದಿಬ್ರುಗಢದಿಂದ ದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್ ಪ್ರೆಸ್ ರೈಲನ್ನು ಹತ್ತಲು ಯತ್ನಿಸಿದಾಗ ಟಿಟಿಇ ಸೈನಿಕನನ್ನು ಹತ್ತಲು ಬಿಡದೆ ತಳ್ಳಿದ್ದಾರೆ ಎಂದು ತಿಳಿಸಲಾಗಿದೆ. ದೇಶ ಕಾಯುವ ಸೈನಿಕ ತನ್ನ 2 ಕಾಲು ಕಳೆದುಕೊಂಡು ಮನೆಯಲ್ಲಿ ಕೂರುವಂತಾಗಿರೊದು ದುಃಖದ ಸಂಗತಿ.

ಉಳಿದ ಪೂಜಾ ಸಾಮಗ್ರಿಗಳನ್ನು ಏನು ಮಾಡಬೇಕು ಗೊತ್ತಾ…? ತಿಳಿದುಕೊಳ್ಳಿ..

ಘಟನೆ ನಂತರ ಬರೇಲಿ ಜಂಕ್ಷನ್ ನಲ್ಲಿ ಯೋಧರು ರೈಲನ್ನು ನಿಲ್ಲಿಸಿ ಟಿಟಿಇಗೆ ಥಳಿಸಿದ್ದಾರೆ. ಈ ಘಟನೆಯಲ್ಲಿ ಸೈನಿಕನ ಒಂದು ಕಾಲು ಕತ್ತರಿಸಲ್ಪಟ್ಟಿದ್ದು, ಇನ್ನೊಂದು ಕಾಲು ಗಂಭೀರ ಗಾಯಗೊಂಡಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸೈನಿಕ ಸೋನುಕುಮಾರ್ ಅವರು ಲಕ್ನೊದಿಂದ ದೆಹಲಿಗೆ ಹೊರಟಿದ್ದರು. ಸೋನುಕುಮಾರ್ ನೀರು ತರಲು ಬರೇಲಿ ಜಂಕ್ಷನ್ ನಲ್ಲಿ ಇಳಿದಿದ್ದರು ಸ್ವಲ್ಪ ಸಮಯದ ನಂತರ ರೈಲು ಹೊರಟಿರುವದನ್ನು ಕಂಡು ಓಡಿ ಬಂದು ರೈಲು ಹತ್ತಲು ಯತ್ನಿಸಿದಾಗ ಟಿಟಿಇ ತಳ್ಳಿದ್ದಾರೆ ಎಂದು ಹೇಳಲಾಗಿದೆ. ಘಟನೆ ನಂತರ ಟಿಟಿಇ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.

ಪಶ್ಚಿಮ ಬಂಗಳಾದಲ್ಲಿ ಕಚ್ಚಾ ಬಾಂಬ್ ಸ್ಫೋಟ : 9 ವರ್ಷದ ಬಾಲಕಿ ಸಾವು

- Advertisement -

Latest Posts

Don't Miss