Sunday, September 8, 2024

Latest Posts

ಅಮಾವಾಸ್ಯೆಯ ದಿನ ಮಾಡ ಬೇಕಾದ ತ್ರಿಕೋನ ಪೂಜ ನಿಯಮಗಳು …!

- Advertisement -

Devotional tips:

ಅಕ್ಟೋಬರ್ ೨೫ ವಿಶೇಷವಾದ ಅಮಾವಾಸ್ಯೆ ಬಂದಿದೆ ಅವತ್ತಿನ ದಿನ ಮನೆಯಲ್ಲಿ ಈ ರೀತಿಯಾಗಿ ಲಕ್ಷ್ಮಿ ದೇವಿಯನ್ನು ಪೂಜೆಮಾಡಿದರೆ ನಿಮಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ ಹಾಗು ಸಕಲ ದಾರಿದ್ರ್ಯ ದೋಷಗಳು ದೂರವಾಗುತ್ತದೆ ,ಅವಿತ್ತಿನ ದಿನ ಮನೆಯಲ್ಲಿ ಮಾಡಲೇ ಬೇಕಾದ ಮೂರೂ ವಿಶೇಷವಾದ ಕೆಲಸಗಳು ಯಾವುದು ಈ ಕೆಲಸ ಮಾಡುವುದರಿಂದ ಯಾವೆಲ್ಲ ಲಾಭಗಳು ಪ್ರಾಪ್ತಿಯಾಗುತ್ತದೆ ,ಈ ಕೆಲಸ ಮಾಡುವುದರಿಂದ ಯಾವರೀತಿಯ ಸಂಕಷ್ಟಗಳು ದೂರವಾಗುತ್ತದೆ ಎಂದು ಇವತ್ತಿನ ಸಂಚಿಕೆಯಲ್ಲಿ ತಿಳಿದು ಕೊಳ್ಳೋಣ ಬನ್ನಿ .

ಈ ಒಂದು ಅಮಾಯಸ್ಯೆಯ ದಿನವೇ ಸೂರ್ಯ ಗ್ರಹಣವು ಏರ್ಪಡುತ್ತದೆ ಆದರೆ ನಾವು ಈ ಗ್ರಹಣವನು ಆಚರಿಸುವಂತಿಲ್ಲ ಏಕೆಂದರೆ ಈ ಸೂರ್ಯಗ್ರಹಣವು ನಮ್ಮ ಭಾರತದಲ್ಲಿ ಗೋಚರಿಸುವುದಿಲ್ಲ ಆದರೆ ಬೇರೆ ದೇಶಗಲ್ಲಿ ಗೋಚರಿಸುತ್ತದೆ, ಆದಕಾರಣ ಗ್ರಹಣ ಗೋಚರಿಸುವ ಸಮಯ ಬಿಟ್ಟು ಉಳಿದ ಸಮಯದಲ್ಲಿ ಈ ಮೂರೂ ಪೂಜೆಗಳನ್ನು ನಿಮ್ಮ ಮನೆಯಲ್ಲಿ ಮಾಡಿದರೆ ವಿಶೇಷವಾಗಿ ಲಕ್ಷ್ಮೀದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ .

ಈ ಪೂಜೆಯನ್ನು ನೀವು ಅರಿಶಿನದಿಂದ ಮಾಡಬೇಕು ಮುಂಜಾನೆ ಅಥವಾ ಸಾಯಂಕಾಲ ಲಕ್ಷ್ಮಿ ದೇವಿಯನ್ನು ಸ್ಮರಿಸುತ್ತ ಈ ಪೂಜೆಯನ್ನು ಮಾಡಬೇಕು ಏನೆಂದರೆ ,ನಿಮ್ಮ ಮನೆಯ ದೇವರ ಕೋಣೆಯಲ್ಲಿ ಒಂದು ಮಣೆಯ ಮೇಲೆ ಹರಿಶಿಣದಿಂದ ತ್ರಿಕೋನವನ್ನು ಬಿಡಿಸಿಕೊಳ್ಳಬೇಕು, ತ್ರಿಕೋನದ ಮಧ್ಯಭಾಗದಲ್ಲಿ ಲಕ್ಷ್ಮೀದೇವಿಯ ಚಿತ್ರಪಟವನ್ನು ಇಡಬೇಕು. ನಂತರ ಲಕ್ಷ್ಮಿ ದೇವಿಗೆ ಪಂಚ ಉಪಚಾರಗಳನ್ನು ಮಾಡಬೇಕು ಆ ಪಂಚ ಉಪಚಾರಗಳು ಯಾವುದೆಂದೆರೆ ,ಗಂದ ,ಪುಷ್ಪ ,ದೂಪ ,ದೀಪ, ನೈವೇದ್ಯ ,ಈ ೫ ಉಪಚಾರಗಳನ್ನು ನೀವು ಲಕ್ಷ್ಮಿ ದೇವಿಗೆ ತಪ್ಪದೆ ಮಾಡಬೇಕು .ನಂತರ ಆ ದಿನ ಲಕ್ಷ್ಮೀದೇವಿಗೆ ಗಂಧದ ಬೊಟ್ಟನ್ನು ಇಟ್ಟು ,ವಿವಿಧ ಹೊಗಳಿಂದ ಅಲಂಕಾರ ಮಾಡಿ ತುಪ್ಪದ ದೀಪಗಳನ್ನು ಬೆಳಗಬೇಕು ಹಾಗು ಬೆಲ್ಲದಿಂದ ಮಡಿದ ನೈವೇದ್ಯ ಇಡಬೇಕು. ಈ ಒಂದು ಪೂಜೆಯನ್ನು ಅಮಾವಾಸ್ಯೆಯ ದಿನ ಮಾಡುವುದರಿಂದ ಜೀವನದಲ್ಲಿ ವಿಪರೀತವಾದ ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ .

ಎರಡನೆಯದಾಗಿ ಈ ಅಮಾವಾಸ್ಯೆಯ ದಿನ ಗೋಮಾತೆಗೆ ೫ವಿಧವಾದ ಹಣ್ಣುಗಳನ್ನು ತಿನ್ನಿಸಿದರೆ ಬಹಳ ಒಳ್ಳೆಯದು ೫ ವಿಧವಾದ ಹಣ್ಣುಗಳು ಸಿಗಲಿಲ್ಲ ವೆಂದರೆ ಯಾವುದಾದರು ಒಂದೇ ಹಣ್ಣು ೫ತಿನ್ನಿಸಬಹುದು ಈ ಒಂದು ಕೆಲಸ ಮಾಡಿದರೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಖಂಡಿತ ನಿಮಗೆ ಸಿಗುತ್ತದೆ ಹಾಗು ದೇವತೆಗಳ ಅನುಗ್ರಹ ಪ್ರಾಪ್ತಿಯಾಗಿ ,ಅದ್ಭುತವಾದ ಫಾಲಗಳು ಪ್ರಾಪ್ತಿಯಾಗುತ್ತದೆ .

ಮೂರನೆಯದಾಗಿ ,ಯಾರ ಮನೆಯಲ್ಲಿ ವಿಪರೀತವಾದ ಆರೋಗ್ಯ ಸಮಸ್ಯೆಗಳು ,ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿರುತ್ತದೆಯೋ ಹಾಗು ಮನೆಯಲ್ಲಿ ಶಾಂತಿ ನೆಮದ್ದಿ ಇರುವುದಿಲ್ಲವೋ ಅಂತವರು ಗೋದಿ ಇಟ್ಟಿನಿಂದ ಈ ಒಂದು ಕೆಲಸವನ್ನು ಮಾಡಬೇಕು ಅದೆನೆಂದೆರೆ ಗೋದಿ ಇಟ್ಟಿಗೆ ಸ್ವಲ್ಪ ಹಾಲನ್ನು ಬೆರಸಿ ಸಕ್ಕರೆ ಅಥವಾ ಬೆಲ್ಲವನ್ನು ಬೆರೆಸಿಕೊಂಡು ಉಂಡೆಯ ರೀತಿಯಲ್ಲಿ ಕಟ್ಟಬೇಕು ನಂತರ ಆ ಉಂಡೆಯನ್ನು ಜಲಚರಗಳಿಗೆ ಆಹಾರವಾಗಿ ಕೊಡಬೇಕು ಈ ಒಂದು ಕೆಲಸವನ್ನು ಮಾಡುವುದರಿಂದ ನಿವು ಅದ್ಭುತವಾದ ಫಲಿತಾಂಶಗಳನ್ನು ನೋಡಬಹುದು. ಈ ಅಮಾವಾಸ್ಯೆಯ ದಿನ ಈ ಮೂರೂ ಕೆಲಸಗಳಲ್ಲಿ ಯಾವುದಾದರು ಒಂದು ಕೆಲಸ ಮಾಡಿದರೆ ಸಾಕು ನೀವು ಅದ್ಭುತವಾದ ಫಲಿತಾಂಶಗಳನ್ನು ಕಾಣಬಹುದು ,ಇದರಲ್ಲಿ ಅತಿಮುಕ್ಯವಾಗಿರುವುದು ಲಕ್ಷ್ಮೀದೇವಿಗೆ ಪಂಚ ಉಪಚಾರಗಳನ್ನು ಮಾಡುವುದು .

ದೀಪಾವಳಿಯ ಅಮಾವಾಸ್ಯೆ ಹಾಗು ಸೂರ್ಯಗ್ರಹಣ ಒಟ್ಟಿಗೆ ಬಂದಿದೆ ಹಾಗಾದರೆ ದೀಪಾವಳಿ ಹೇಗೆ ಆಚರಿಸಬೇಕು ….?

ಕುಬೇರನ ಅಹಂ ಇಳಿಸಿದ ಸುಮುಖ ….!

ಅಕ್ಟೋಬರ್ 2021ರ ಮಾಸ ಭವಿಷ್ಯ, ಈ ರಾಶಿಗೆ ಶುಕ್ರ ದೆಸೆ ಶುರೂ..?!

 

- Advertisement -

Latest Posts

Don't Miss