Hubballi News : ಅವಳಿ ನಗರಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ಬೃಹತ್ ಉಣಕಲ್ ಕೆರೆ ಭರ್ತಿಯಾಗಿದೆ. ಗಾಮನಹಟ್ಟಿ , ನವನಗರದಲ್ಲಿ ಸುರಿದ ಮಳೆಯಿಂದಾಗಿ ಈ ಕೆರೆ ಭರ್ತಿಯಾಗಿವೆ.
ಸುಮಾರು 200 ಎಕರೆ ವಿಸ್ತೀರ್ಣ ಹಾಗು 110 ವರ್ಷಗಳ ಇತಿಹಾಸವನ್ನು ಉಣಕಲ್ ಕೆರೆ ಒಳಗೊಂಡಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಧ್ಯ ಇರುವ ಅತೀ ದೊಡ್ಡ ಕೆರೆ ಇದಾಗಿದ್ದು, ಸಂಪೂರ್ಣ ಭರ್ತಿಯಾಗಿ ಹಲವು ಪ್ರದೇಶಗಳ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಕಾಲುವೆ ಅಂಚಿನ ಪ್ರದೇಶಗಳಲ್ಲಿ ಆತಂಕ ಹೆಚ್ಚಾಗಿದೆ. ಕೆರೆ ಕೋಡಿಯಿಂದ ರಾಜಕಾಲುವೆಗೆ ನೀರು ಸೇರುತ್ತಿದ್ದು, ರಾಜಕಾಲುವೆಯಲ್ಲಿ ನೀರು ಹೆಚ್ಚಾದಲ್ಲಿ ಹಲವು ಪ್ರದೇಶಗಳ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು ರಾಜಕಾಲುವೆಗಳಲ್ಲಿ ಇದುವರೆಗೂ ಹೂಳು ಎತ್ತದ ಹಿನ್ನೆಲೆ, ಕಾಲುವೆಯಲ್ಲಿ ನೀರು ಹೆಚ್ಚಾದರೆ ಹುಬ್ಬಳ್ಳಿಯ ಹಲವು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಕೊಳಚೆ ಮಿಶ್ರಿತ ನೀರು ಮನೆಗಳಿಗೆ ನುಗ್ಗುವ ಆತಂಕ ಎದುರಾಗಿದ್ದು ನೀರು ನುಗ್ಗಿದ್ದೆ ಆದಲ್ಲಿ ಜನ ಜೀವನ ಆತಂತ್ರವಾಗುವ ಪರಿಸ್ಥಿತಿ ಎದುರಾಗಲಿದೆ.
Hanitrap: ಸಚಿವರಾಗಿದ್ದಾಗ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು…!
Subhramanya Rain : ಕುಕ್ಕೆ: ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ಮುಳುಗಡೆ