Friday, June 20, 2025

Latest Posts

13 ವರ್ಷದ ಗೆಳೆಯನನ್ನು ಕತ್ತು ಸೀಳಿ ಕೊಲೆ ಮಾಡಿದ 16 ರ ಬಾಲಕ…! ಕಾರಣ ಕೇಳಿದ್ರೆ ಆಶ್ಚರ್ಯವಾಗುತ್ತೆ..!

- Advertisement -

Uttarpradesh stories:

ತನ್ನ13 ವರ್ಷದ ಗೆಳೆಯನನ್ನು 16ರ ತರುಣ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ದೆಹಲಿ ಮೀರತ್ ಎಕ್ಸ್‌ಪ್ರೆಸ್ ವೇಯಲ್ಲಿ ಬರುವ ಮಸುರಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಆದರೆ ಆತನ ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಹೀಗೆ ಕೊಲೆ ಮಾಡಿದರೆ ಶಾಲೆಗೆ ಹೋಗಿ ಅಧ್ಯಯನ ನಡೆಸುವುದರಿಂದ ಪಾರಾಗಿ, ಜೈಲಿನಲ್ಲಿ ಆರಾಮವಾಗಿ ಕುಳಿತು ತಿನ್ನಬಹುದೆಂದು ಭಾವಿಸಿ ಈ ಬಾಲಕ ಸುಮಾರು ಕಳೆದ ಐದು ತಿಂಗಳಿನಿಂದ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.

ಮಂಗಳವಾರ ಈತ ತನ್ನ 13 ವರ್ಷದ ಸ್ನೇಹಿತನನ್ನು ಕಾರು ನೋಡುವ ನೆಪದಲ್ಲಿ ಕರೆದುಕೊಂಡುಹೋಗಿದ್ದಾನೆ. ದೆಹಲಿ ಮೀರತ್ ಎಕ್ಸ್‌ಪ್ರೆಸ್‌ ವೇಯ ಕೆಳಗೆ ಗೆಳೆಯನೊಂದಿಗೆ ಸಮಯ ಕಳೆಯಲು ನಿರ್ಧರಿಸಿ. ಅಲ್ಲಿ ಆತ ರಸ್ತೆಯಲ್ಲಿ ಬಿದ್ದಿದ್ದ ಗಾಜಿನ ತುಂಡೊಂದನ್ನು ಕೈಗೆತ್ತಿಕೊಂಡು ಸ್ನೇಹಿತನ ಕುತ್ತಿಗೆಯನ್ನು ಸೀಳಿದ್ದಾನೆ. ನಂತರ ಆತ ಬಾಲಕನ ದೇಹವನ್ನು ಎಳೆದುಕೊಂಡು ಹೋಗಿ  ದೆಹಲಿ ಮೀರತ್ ಎಕ್ಸ್‌ಪ್ರೆಸ್‌ ವೇಯ ಸಮೀಪದ ಪೊದೆಯಲ್ಲಿ ಎಸೆದು ಹೋಗಿದ್ದಾನೆ.

ರಾಜಸ್ಥಾನದಲ್ಲಿ ಜೂಜು,ಮೋಜು : ಪೊಲೀಸ್‌ ಇನ್ಸ್‌ಪೆಕ್ಟರ್‌ ಸೇರಿ ರಾಜ್ಯ ದ ಕೆಲ ಅಧಿಕಾರಿಗಳು ಪೊಲೀಸ್ ವಶಕ್ಕೆ

ಬೆಂಗಳೂರಿನಲ್ಲಿ ಭೀಕರ ಅಪಘಾತ: ಅಕ್ಕ-ತಮ್ಮ ದುರ್ಮರಣ

ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟ, ಪ್ರವಾಹ: ಒಂದೇ ಕುಟುಂಬದ 8 ಜನ ಸೇರಿ 19 ಮಂದಿ ಬಲಿ, 6 ಮಂದಿ ನಾಪತ್ತೆ

- Advertisement -

Latest Posts

Don't Miss