ಮುಜಾಫರ್ ನಗರ ಗಲಭೆಯಲ್ಲಿ ಬಾಗಿಯಾಗಿದ್ದ ಶಾಸಕ ಅನರ್ಹ : ಖತೌಲಿ ವಿಧಾನಸಭೆ ಕ್ಷೇತ್ರ ತೆರವು

ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಕಾರ್ಯದರ್ಶಿ ಖತೌಲಿ ವಿಧಾನಸಭಾ ಕ್ಷೇತ್ರ ತೆರವಾಗಿದೆ ಎಂದು ಅಧಿಸೂಚನೆ ಹೊರಡಿಸಿದ್ದಾರೆ. 2013ರಲ್ಲಿ ಮುಜಾಫರ್ ನಗರ ಗಲಭೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಕ್ರಮ್ ಸೈನಿ ಅವರನ್ನು ಜನಪ್ರತಿನಿಧಿನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಮುಜಾಫರ್ ನಗರ ಶಾಸಕ ಜನಪ್ರತಿನಿಧಿ ನ್ಯಾಯಾಲಯ ವಿಕ್ರಂಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅ.11ರಿಂದ ಜಾರಿಗೆ ಬರುವಂತೆ ಖತೌಲಿ ವಿಧಾನಸಭಾ ಕ್ಷೇತ್ರ ತರವಾಗಲಿ ಎಂದು ಅಧಿಸೂಚನೆಯಲ್ಲಿ ತಿಳಿಸಿದರು.

ವಿಧಾನಸಭೆ ಕಾರ್ಯದರ್ಶಿ ಸತೀಶ್ ಮಹಾನ್ ಅವರಿಗೆ ಪತ್ರ  ಬರೆದಿದ್ದ ಆರ್ ಎಲ್ ಡಿ ನಾಯಕ  ಜಯಂತ್ ಚೌಧರಿ, ಅಜಂ ಖಾನ್ ಅವರ ಕ್ಷೇತ್ರ ತೆರವಾಗಿದೆ ಎಂದು ಘೋಷಣೆ ಮಾಡಿದ್ದಾದರೆ, ಜೈಲು ಶಿಕ್ಷೆ ವಿಧಿಸಿರುವ ಸೈನಿ ಅವರನ್ನು ಏಕೆ ಅನರ್ಹ ಮಾಡಿಲ್ಲವೆಂದು ಪ್ರಶ್ನಿಸಿದ್ದರು.

ಅಭ್ಯಾಸದ ವೇಳೆ ಕೈಗೆ ಪೆಟ್ಟು ಮಾಡಿಕೊಂಡ ರೋಹಿತ್ ಶರ್ಮಾ : ಆತಂಕದಲ್ಲಿರುವ ತಂಡ

ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು, ಅಭಿಮಾನಿಗಳಿಗಾಗಿ ಪೋಟೋ ಹಂಚಿಕೊಂಡ ಸಮಂತಾ

About The Author