ಉತ್ತರ ಪ್ರದೇಶ : ದೋಣಿ ಮುಳುಗಡೆ 7 ಮಂದಿ ಜಲ ಸಮಾಧಿ

UttharPradesh News:

ಉತ್ತರ  ಪ್ರದೇಶದಲ್ಲಿ  ರಕ್ಕಸ ಮಳೆಯಿಂದಾಗಿ  ಗಂಗೆ ಉಗ್ರ ರೂಪ  ತಾಳಿ ಪ್ರವಾಹವನ್ನೇ  ಸೃಷ್ಟಿ ಮಾಡುತ್ತಿದ್ದಾಳೆ. ಪ್ರವಾಹಕ್ಕೆ  ದೋಣಿಯೊಂದು  ಮುಳುಗಡೆಯಾಗಿ 7 ಮಂದಿ  ಜಲ ಸಮಾಧಿಯಾಗಿದ್ದಾರೆ.

ಗಂಗಾ ನದಿಯಲ್ಲಿ ಜನರನ್ನು ಸಾಗಿಸುತ್ತಿದ್ದ ದೋಣಿಯೊಂದು ಮುಳುಗಡೆಯಾಗಿ ಐದು ಮಕ್ಕಳು ಸೇರಿ ಶವಗಳನ್ನು 7 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಸಂಧ್ಯಾ ಕುಮಾರ್ (6), ಅನಿತಾ ಪಾಸ್ವಾನ್ (10), ಅಲಿಸಾ ಯಾದವ್ (5), ಖುಶಾಲ್ ಯಾದವ್ (10) ಮತ್ತು ಸತ್ಯಂ (12) ಎಂದು ಗುರುತಿಸಲಾಗಿದ್ದು, ಸ್ಥಳೀಯರ ಸಹಾಯದಿಂದ ಕೆಲವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ.

24 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯು ಮುಳುಗಡೇಯಾಗಿದ್ದು, ಜನರು ವಾರದ ಮಾರುಕಟ್ಟೆಯಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.

ಯಳಂದೂರು : ಗ್ರಾಮಪಂಚಾಯತ್ ಆವರಣದಲ್ಲೇ ಮಹಿಳೆಯ ಅಂತ್ಯಕ್ರಿಯೆ…!

ವಿಜಯಪುರದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸಾವು

ಮೈಸೂರು : ಎಚ್1 ಎನ್1 ಗೆ ತುಂಬು ಗರ್ಭಿಣಿ ಬಲಿ

About The Author