Karkala News: ಕಾರ್ಕಳ : ಎನ್.ಎಸ್. ಯುನಿಟ್, ನಿಟ್ಟೆ ಡಿಯು ಮತ್ತು ಡಿಪಾರ್ಟ್ಮೆಂಟ್ ಆಫ್ ಕಮ್ಯೂನಿಟಿ ಮೆಡಿಸಿನ್, ಕ್ಷೇಮ ನಿಟ್ಟೆ ಯೂನಿರ್ವಸಿಟಿ ರೂರಲ್ ಹೆಲ್ತ್ ಸೆಂಟರ್ ಸಹಯೋಗದೊಂದಿಗೆ ಲಯನ್ಸ್ ಕ್ಲಬ್ ನೀರೆ ಬೈಲೂರು ಇವರ ವತಿಯಿಂದ ಕೌಡೂರು ಶ್ರೀನಿವಾಸ ಹೆಗ್ಡೆ ಅರೋಗ್ಯ ಕೇಂದ್ರ ಬೈಲೂರು ಇದರ ವಠಾರದಲ್ಲಿ ಔಷಧಿಯ ಸಸ್ಯಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ಡಾ| ದಿನೇಶ್ಚಂದ್ರ ಹೆಗ್ಡೆ ಗಿಡ ನೇಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ನೀರೆ ಬೈಲೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸುಜಯ ಜತ್ತನ್ನ, ಕಾರ್ಯದರ್ಶಿ ಐವನ್ ಮಿರಾಂದ, ಕೋಶಾಧಿಕಾರಿ ಸತೀಶ್ ಶೆಟ್ಟಿ, ಪ್ರಥಮ ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ಉದಯ ಕುಮಾರ್ ಹೆಗ್ಡೆ, ಸುರೇಶ್ ಶೆಟ್ಟಿ ಸಾಯಿರಾಮ್, ಲಿಯೋ ಅಧ್ಯಕ್ಷೆ ಸುಹಾನ ಜತ್ತನ್ನ, ಮಹಿಳಾ ವೈಧ್ಯಕೀಯ ಅಧಿಕಾರಿ ಡಾ| ಕನಕತಾರ, ಡಿಪಾರ್ಟ್ಮೆಂಟ್ ಆಫ್ ಕಮ್ಯೂನಿಟಿ ಮೆಡಿಸಿನ್, ಕ್ಷೇಮ ಇದರ ವಿಭಾಗ ಮುಖ್ಯಸ್ಥ ಡಾ| ನಂಜೇಶ್ ಮತ್ತಿತರರು ಪಾಲ್ಗೊಂಡಿದ್ದರು.
Chandrayana-3 : ಇದು ಭಾರತಕ್ಕೆ ಹೆಮ್ಮೆಯ ಕ್ಷಣ : ಸಿಎಂ ಸಿದ್ದರಾಮಯ್ಯ