ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಕೆಲವೊಮ್ಮೆ ವಿನಾಕಾರಣ ಸಮಸ್ಯೆಗಳು ಕಷ್ಟಗಳು ಎದುರಾಗುತ್ತಲೇ ಇರುತ್ತವೆ, ಆದರೆ ಇದಕ್ಕೆ ಏನು ಕಾರಣ ಎನ್ನುವುದು ಮಾತ್ರ ತಿಳಿದಿರುವುದಿಲ್ಲ, ಇಂತಹ ಸಮಸ್ಯೆಗಳಿಗೆ ಕೆಲವೊಮ್ಮೆ ನಾವು ದೇವರಿಗೆ ಮಾಡಿಕೊಂಡಂತಹ ಹರಕೆಗಳನ್ನು ತೀರಿಸಿದೆ ಹೋದರು ಕೂಡ ಸಮಸ್ಯೆಗಳು ಎದುರಾಗುತ್ತವೆ. ಎಷ್ಟು ಬಾರಿ ನಾವು ಯಾವುದೋ ಒಂದು ಕಷ್ಟಗಳಿಗೆ ದೇವರ ಬಳಿ ಹರಕೆಯನ್ನು ಕಟ್ಟಿಕೊಂಡಿರುತ್ತೇವೆ. ಒಂದು ಹರಕೆ ಸಮಯ 12ವರ್ಷ ಇರುತ್ತದೆ. ಎಷ್ಟು ಬಾರಿ ನಮ್ಮ ಹಿರಿಯರು ಏನಾದರೂ ಹರಕೆ ಕಟ್ಟಿ ಅವರಿಗೆ ಹರಕೆ ತೀರಿಸಲು ಆಗದೆ ನಿಧನ ಹೊಂದಿದ್ದರೆ ಅವರ ಹರಿಗೆಯ ಜವಾಬ್ದಾರಿ ಮಕ್ಕಳಿಗೆ ಬರುತ್ತದೆ ಮಕ್ಕಳು ಕೂಡ ಅದನ್ನು ತಿಳಿಯದೇ ಹಾಗೆ ತೀರಿಸದಿದ್ದರೆ ಅದರ ಸಮಸ್ಯೆಯನ್ನು ಕೂಡ ಮಕ್ಕಳು ಎದುರಿಸಬೇಕಾಗುತ್ತದೆ, ಆದಕಾರಣ ದೇವರಿಗೆ ಕಟ್ಟಿದ ಹರಕೆಯನ್ನು ಆದಷ್ಟು 12ವರ್ಷಗಳ ಒಳಗಡೆ ತೀರಿಸುವುದು ಒಳ್ಳೆಯದು. ಇನ್ನು ನೀವು ಏನಾದರೂ ಯಾವ ದೇವರಿಗೆ ಯಾವ ಹರಕೆಯನ್ನು ಕಟ್ಟಿದ್ದೇವೆ, ನಮ್ಮ ಹಿರಿಯರು ಯಾವ ರೀತಿಯಾದ ಹರಕೆಯನ್ನು ಕಟ್ಟಿದ್ದರು ಇನ್ನು ತಿಳಿದಿಲ್ಲ ಎನ್ನುವವರು ಸಮಸ್ಯೆಯಿಂದ ಹೊರಗೆ ಬರಲು ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು, ಹಾಗಾದರೆ ದೇವರಿಗೆ ಕಟ್ಟಿದ ಹರಕೆ ಮರೆತುಹೋದರೆ ಸಮಸ್ಯೆಯಿಂದ ಹೊರಬರಲು ಯಾವ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ನೋಡೋಣ. ದೇವರಿಗೆ ಕಟ್ಟಿದ ಹರಕೆ ಮರೆತು ಹೋಗಿದ್ದರೆ ನೀವು ಎಲ್ಲ ವಿಘ್ನಗಳನ್ನು ನಿವಾರಣೆ ಮಾಡುವಂತಹ ವಿಘ್ನವಿನಾಯಕನ ಮೊರೆಹೋಗಬೇಕು, ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ರೂಪಾಯಿಯ ನಾಣ್ಯವನ್ನು ನೀವು ಸಿದ್ಧಪಡಿಸಿ ಕೊಂಡಿರಬೇಕು, ಒಂದು ರೂಪಾಯಿ ಎರಡು ರೂಪಾಯಿ ಹೀಗೆ ನಾಣ್ಯಗಳನ್ನು ಶೇಖರಿಸಿಕೊಂಡು ಗಣೇಶನ ದೇವಾಲಯಕ್ಕೆ ಹೋಗಬೇಕು, ಅಲ್ಲಿ ಹೋದ ನಂತರ ನಿಮ್ಮ ಬಲಗೈನ ಒಂದು ಮುಷ್ಟಿಯಷ್ಟು ನಾಣ್ಯವನ್ನು ಹಿಡಿದು ನಾವು ಮಾಡಿದ್ದು ತಪ್ಪಾಯ್ತು ಯಾವ ರೀತಿ ಹರಕೆ ಕಟ್ಟಿದ್ದೇವೆ ಮರೆತು ಹೋಗಿರುವುದರಿಂದ ಎಲ್ಲ ತಪ್ಪುಗಳನ್ನು ಮನ್ನಿಸಿ ಈ ಹರಕೆಯನ್ನು ನಿನ್ನ ಪಾದಕ್ಕೆ ಅರ್ಪಿಸಿಕೊಳ್ಳಿ ಎಂದು ಸಂಕಲ್ಪವನ್ನು ಮಾಡಿಕೊಂಡು ಬಲಗೈಯಲ್ಲಿರುವ ನಾಣ್ಯವನ್ನು ಹಿಡಿದು ನಿಮ್ಮ ತಲೆಯ ಮೂರು ಸುತ್ತು ನಿವಾಳಿಸಿಕೊಂಡು ಗಣೇಶನ ಹುಂಡಿಗೆ ಹಾಕಬೇಕು, ಯಾವುದೇ ಕಾರಣಕ್ಕೂ ಕೈಯಲ್ಲಿ ಇರುವ ನಾಣ್ಯವು ಕೈಯಿಂದ ಕಡೆಗೆ ಜಾರದಂತೆ ನೋಡಿಕೊಳ್ಳಬೇಕು. ಈ ರೀತಿಯಾಗಿ ಮೂರು ಬಾರಿ ಮೂರು ಮುಷ್ಟಿಯಷ್ಟು ನಾಣ್ಯವನ್ನು ಹಿಡಿದು ನಿಮ್ಮ ತಲೆಯನ್ನು ಮೂರು ಸುತ್ತು ನಿವಾಳಿಸಿ ಗಣೇಶನ ಹುಂಡಿಗೆ ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಪೂರ್ವಜರು ಅಥವಾ ನೀವು ಕಟ್ಟಿಕೊಂಡ ಹರಕೆಯು ಇಲ್ಲಿಗೆ ಸಲ್ಲುತ್ತದೆ, ಇದರ ಮೂಲಕ ನಿಮ್ಮ ಹರಕೆಗಳು ನಿಮ್ಮ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ಆದರೆ ಸಾಧ್ಯವಾದಷ್ಟು ಯಾರು ಕೂಡ ದೇವರಿಗೆ ಹರಕೆಯನ್ನು ಕಟ್ಟಿದ್ದನ್ನು ಮರೆಯಬಾರದು ಮತ್ತು ಹರಕೆಯನ್ನು ಕಟ್ಟುವಾಗ ನಿಮಗೆ ಎಷ್ಟು ಸಮಸ್ಯೆ ಇದೆಯೋ ಅಷ್ಟು ಹರಕೆಯನ್ನು ಕಟ್ಟಿ ಅದನ್ನು ತೀರಿಸಿಬಿಡಬೇಕು, ಇಲ್ಲದೆ ಹೋದರೆ ಭವಿಷ್ಯದಲ್ಲಿ ತೊಂದರೆಯನ್ನುಂಟುಮಾಡುತ್ತದೆ ದೇವರಿಗೆ ಕಟ್ಟುವ ಹರಕೆ ಬಹಳ ಶ್ರೇಷ್ಠವಾಗಿದೆ, ಅದನ್ನು ತಿಳಿಸದೆ ಹಾಗೆ ಬಿಟ್ಟರೆ ಅದರಿಂದ ಕಷ್ಟವನ್ನು ಎದುರಿಸಬೇಕಾಗುತ್ತದೆ.