Thursday, October 16, 2025

Latest Posts

ಯಾವ ನಾಯಿ ಹೋರಾಡಿತ್ತು? ಖರ್ಗೆಗೆ B.L ಸಂತೋಷ್‌ ಸವಾಲ್ !

- Advertisement -

ಭಾರತದ ಸ್ವಾತಂತ್ರ್ಯ ಹೋರಾಟ ವಿಚಾರ ಇಂದಿಗೂ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ. ಮೈಸೂರಿನ ಕಲಾಮಂದಿರದಲ್ಲಿ ನಡೆದ ಸಾವರ್ಕರ್ ಕಲ್ಪನೆಯ ಭಾರತೀಯ ಸೇನೆ ಮತ್ತು ಆಪರೇಷನ್ ಸಿಂಧೂರ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿ ನಾಯಿ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ ಎಂದಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂತೋಷ್, ಕಾಂಗ್ರೆಸ್ ಮನೆಯ ಯಾವ ನಾಯಿ ಹೋರಾಡಿತ್ತು? ಅದನ್ನೇ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘ ಹುಟ್ಟಿದ್ದು 1951ರಲ್ಲಿ, ಬಿಜೆಪಿ ಹುಟ್ಟಿದ್ದು 1980ರಲ್ಲಿ. ಹೀಗಿರುವಾಗ ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವುದು ಹೇಗೆ ಸಾಧ್ಯ? ಆದರೆ, ಹೆಗಡೇವಾರ್ ಮೊದಲಾದವರು ಸ್ವಾತಂತ್ರ್ಯ ಹಾದಿಯಲ್ಲೇ ನಡೆದವರು ಎಂದು ಹೇಳಿದರು. ರಾಜ್ಯ ಸರ್ಕಾರದಲ್ಲಿ ಮೂವರು ಬಚ್ಚಲುಬಾಯಿ ಮಂತ್ರಿಗಳಿದ್ದಾರೆ. ದೇಶದಲ್ಲಿ ಎಲ್ಲಿ ಹೋದರೂ ಇಂದಿರಾ, ರಾಜೀವ್‌ ಹೆಸರಿದೆ. ಆದರೆ ಬೆಂಗಳೂರಿನಲ್ಲಿ ಒಂದು ಫ್ಲೈ ಓವರ್ ಗೆ ಸಾವರ್ಕರ್ ಹೆಸರು ಇಡಲು ವಿರೋಧವೇಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ತನಗೆ ಅನುಕೂಲಕರವಲ್ಲದ ಸತ್ಯದ ವಿರುದ್ಧ ಅಪಪ್ರಚಾರ ಮಾಡುತ್ತಲೇ ಇದೆ. ಸ್ವಾತಂತ್ರ್ಯ ಗಳಿಸುವಲ್ಲಿ ಅಸಹಕಾರ ಆಂದೋಲನದ ಬಹುದೊಡ್ಡ ಪಾತ್ರವಿರುವುದು ನಿಜ. ಕಾಂಗ್ರೆಸ್ ಹೋರಾಟವೂ ನಿಜ. ಅಂದು ಇದ್ದದ್ದೇ ಒಂದು ಪಕ್ಷ. ಅದನ್ನು ನಾವು ಅಲ್ಲಗೆಳೆಯುತ್ತಿಲ್ಲ, ಕಾಂಗ್ರೆಸ್ ಕಾರ್ಯವೈಖರಿಯಿಂದ ಭ್ರಮನಿರಸನಗೊಂಡು ಮುಖರ್ಜಿ ಜನಸಂಘವನ್ನು ರಚಿಸಿದರು ಎಂದು ಹೇಳಿದರು.

ವಿನಾಯಕ ದಾಮೋದರ್ ಸಾವರ್ಕರ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವೂ ಇಲ್ಲ. ಹೀಗಾಗಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಅಹಿತಕರ ಸತ್ಯಗಳನ್ನು ಮುಚ್ಚಿಹಾಕಿವೆ. ಆದರೆ, ಕಾಲಕಾಲಕ್ಕೆ ಅಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಕಥೆಗಳು ಹೊರಹೊಮ್ಮುತ್ತವೆ, ಏಕೆಂದರೆ ಸತ್ಯವನ್ನು ಶಾಶ್ವತವಾಗಿ ಮರೆಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಗುರುತಿಸುವ ಮತ್ತು ಮೆಚ್ಚುವವರಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ಕೆಲವು ಜನರ ವಿರೋಧ ಭಕ್ತಿ ಅವರ ಬಗ್ಗೆ ಕುತೂಹಲವನ್ನು ಮೂಡಿಸಲು ಸಹಾಯ ಮಾಡುತ್ತದೆ, ಇದು ಅಜ್ಞಾನಿಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ಸತ್ಯದ ಸಾಕ್ಷಾತ್ಕಾರಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನಾವು ಸಿದ್ದರಾಮಯ್ಯ ಅವರಂತಹ ವಿರೋಧಿಗಳಿಗೂ ಧನ್ಯವಾದ ಹೇಳಬೇಕು ಎಂದು ಸಂತೋಷ್ ಹೇಳಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss