ಜಗದೀಪ್ ಧನಕರ್ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ, ಇಂದೇ ಚುನಾವಣೆ ನಡೀತಿದೆ. ಇಂಡಿಯಾ ಒಕ್ಕೂಟದಿಂದ ಸುದರ್ಶನ್ ರೆಡ್ಡಿ ಕಣದಲ್ಲಿದ್ರೆ, ಎನ್ಡಿಎ ಅಭ್ಯರ್ಥಿಯಾಗಿ ರಾಧಾಕೃಷ್ಣನ್ ಅಖಾಡದಲ್ಲಿದ್ದಾರೆ.
ದೇಶದ 2ನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ಉಪರಾಷ್ಟ್ರಪತಿ ಸ್ಥಾನಕ್ಕೆ, ನಡೆಯುವ ಚುನಾವಣೆಯಲ್ಲಿ ಜನಸಾಮಾನ್ಯರ ನೇರ ಪಾತ್ರ ಇರುವುದಿಲ್ಲ. ಬದಲಿಗೆ ಸಂಸದರು ಮತ ಚಲಾಯಿಸುವ ಅಧಿಕಾರ ಹೊಂದಿರುತ್ತಾರೆ. ಲೋಕಸಭೆಯ 543 ಸಂಸದರು, ರಾಜ್ಯಸಭೆಯ 245 ಸದಸ್ಯರು ಸೇರಿ, ಒಟ್ಟು 788 ಸಂಸದರು ಉಪರಾಷ್ಟ್ರಪತಿಗಳನ್ನು ಚುನಾಯಿಸುತ್ತಾರೆ.
ಇವರನ್ನೆಲ್ಲಾ ಎಲೆಕ್ಟೋರಲ್ ಕಾಲೇಜ್ ಎಂದು ಕರೆಯಲಾಗುತ್ತದೆ. ಆದರೆ ಪ್ರಸ್ತುತ ಲೋಕಸಭೆಯಲ್ಲಿ 1 ಮತ್ತು ರಾಜ್ಯ ಸಭೆಯಲ್ಲಿ 6 ಸೀಟುಗಳು ಖಾಲಿ ಇರುವ ಕಾರಣ, 781 ಸಂಸದರಷ್ಟೇ ಮತ ಚಲಾಯಿಸಲಿದ್ದಾರೆ. ಗೆಲುವಿಗೆ 391 ಮತಗಳ ಅಗತ್ಯ ಇದೆ.
ಎನ್ಡಿಎ ಮೈತ್ರಿಕೂಟದಲ್ಲಿ ಉಪರಾಷ್ಟ್ರಪತಿ ಚುನಾವಣೆ ಸಾಂಪ್ರದಾಯಿಕ ಮತಪತ್ರದ ಮೂಲಕ ನಡೆಯುತ್ತದೆ. 1974ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯ 8ನೇ ನಿಯಮದ ಪ್ರಕಾರ, ಅರ್ಹ ಸಂಸದರೆಲ್ಲಾ ಸಂಸತ್ತಿನಲ್ಲಿಯೇ ಗೌಪ್ಯ ಮತದಾನ ಮಾಡುತ್ತಾರೆ. ವಿಪ್ ಜಾರಿಯಾಗಿರದ ಕಾರಣ, ಸಂಸದರು ಯಾವ ಅಭ್ಯರ್ಥಿಗೆ ಬೇಕಾದರೂ ಮತ ನೀಡಬಹುದು.
ಸಂಸದರಿಗೆ ಇಬ್ಬರೂ ಅಭ್ಯರ್ಥಿಗಳ ಹೆಸರಿರುವ ಬ್ಯಾಲೆಟ್ ಪೇಪರ್ ನೀಡಲಾಗುತ್ತದೆ. ಅವರು ತಮ್ಮಿಷ್ಟದ ಹೆಸರಿನ ಎದುರು 1 ಎಂದು ಬರೆಯುವ ಮೂಲಕ ಮತ ಚಲಾಯಿಸುತ್ತಾರೆ.ಆಡಳಿತ ಪಕ್ಷ ಮತ್ತು ವಿಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ, ಸರಳ ಬಹುಮತ ಪಡೆದವರು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುತ್ತಾರೆ.
ಎನ್ಡಿಎ ಮೈತ್ರಿಕೂಟದಲ್ಲಿ 425 ಮತಗಳ ಸಂಖ್ಯೆ ಇದ್ರೆ, ಇಂಡಿಯಾ ಕೂಟದಲ್ಲಿ 324 ಮತಗಳು ಇವೆ. ಲೋಕಸಭೆ, ರಾಜ್ಯಸಭೆಯ ಬಲಾಬಲ ಗಮನಿಸಿದ್ರೆ, ಎನ್ಡಿಎ ಅಭ್ಯರ್ಥಿ ರಾಧಾಕೃಷ್ಣನ್ ಗೆಲುವ ಸಾಧ್ಯತೆ ದಟ್ಟವಾಗಿದೆ. ಇಂದೇ ಚುನಾವಣೆ ನಡೆಯಲ್ಲಿದ್ದು, ಇಂದೇ ಫಲಿತಾಂಶ ಪ್ರಕಟವಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. 5 ಗಂಟೆಯ ಬಳಿಕ ಮತ ಎಣಿಕೆ ನಡೆಯಲಿದ್ದು, ಇಂದು ರಾತ್ರಿ ಒಳಗಾಗಿ ಫಲಿತಾಂಶ ಪ್ರಕಟವಾಗಲಿದೆ.




