State News:
ವಾಯುಭಾರ ಕುಸಿತದಿಂದಾಗಿ ಕಳೆದ ಎರಡು ತಿಂಗಳುಗಳಿಂದ ರಾಜ್ಯದಲ್ಲಿ ಚಳಿಯ ವಿಪರೀತವಾಗಿದ್ದು ಎರಡು ವಾರದಿಂದ ಚಳಿ ಜಾಸ್ತಿಯಾಗಿ ರಾಜ್ಯದ ಜನತೆ ತತ್ತರಿಸಿಹೋಗಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಹಾಗೂ ಉದ್ಯೋಗಿಗಳು ಕೆಲಕ್ಕೆ ಹೋಗಲು ಪರದಾಡುವಂತಾಗಿದೆ.ಹಾಗೂ ಬೆಳಗಿನ ಜಾವ ವಾಹನ ಚಲಾಯಿಸುವ ಸವಾರರು ರಸ್ತೆಕಾಣದೆ ಹೈರಾಣಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ರಸ್ತೆ ಅಪಘಾತಗಳು ಸಂಭವಿಸುತಿದ್ದು ಬೆಳಗಿನ ಜಾವ ವಾತಾವರಣ ತಂಪಾಗಿದ್ದು ಹೊಗೆಯಂತಹ ಮಂಜು ವಾತಾವರಣದಲ್ಲಿ ಇರುವ ಕಾರಣ ರಸ್ತೆ ಅಪಘಾತಗಳಿಗೆ ಇದು ಎಂದು ಕಾರಣ ಅಂತ ಹೇಳಬಹುದು .
ಹಾಗೆಯೆ ಚಳಿಯಿಂದ ಜನರು ಅನಾರೋಗ್ಯಕ್ಕೆ ಒಳಗಾಗೋದು ಸಾಮಾನ್ಯ ಅದಕ್ಕಾಗಿ ಮುಂಜಾಗ್ರತ ಕ್ರಮವಾಗಿ ಹಲವು ಕ್ರಮಗಳನ್ನು ರೂಡಿಸಿಕೊಳ್ಳುವಂತೆ ವೈದ್ಯರು ತಿಳಿಸಿರುತ್ತಾರೆ. ಆರೋಗ್ಯದನ್ನು ಕಾಪಾಡಿಕೊಳ್ಳಲು ಬಿಸಿನೀರನ್ನು ಕುಡಿಯಿರಿ ಹಾಗೂ ಆದಷ್ಟು ಬಿಸಿ ಇರುವಾಗಲೇ ಆಹಾರವನ್ನು ಸೇವಿಸಿ . ಬೆಚ್ಚಗಿನ ಬಟ್ಟೆ ಧರಿಸಿಕೊಳ್ಳುವಂತೆ ಸೂಚಿಸಿದರು.ಹಾಗೆ ರಾಜ್ಯದ ಧಾರವಾಡ ಜಿಲ್ಲೆಯಲ್ಲಿ ಸಹ ಚಳಿಯುಅಧಿಕವಾಗಿದ್ದು ಜನ ಮನೆ ಬಿಟ್ಟು ಹೊರ ಬರಲು ಭಯಪಡುತಿದ್ದಾರೆ.
ಮಂಗಳೂರು: ಗಾಂಜಾ ದಂಧೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳು ಅರೆಸ್ಟ್..?!
“ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೇರು ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ:” ಸಿಎಂ ಬೊಮ್ಮಾಯಿ