Saturday, June 21, 2025

Latest Posts

ಯಡಿಯೂರಪ್ಪ, ನಿತೀಶ್ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ

- Advertisement -

ಕರ್ನಾಟಕ ಟಿವಿ : ವಲಸಿಗರನ್ನ ಅವರ ಊರಿಗೆ ತಲುಪಿಸಲು ರೆಡಿ ಇದ್ದ ರೈಲುಗಳನ್ನ ಸಿಎಂ ಯಡಿಯೂರಪ್ಪ ರಿಯಲ್ ಎಸ್ಟೇಟ್ ಮಾಲೀಕರ ಮಾತು ಕೇಳಿ ಕ್ಯ್ಆನ್ಸಲ್ ಮಾಡಿದ್ರು. ಕಟ್ಟಡ ಕಾರ್ಮಿಕರು ಊರಿಗೆ ಹೋದರೆ ಕಾಮಗಾರಿ ಅರ್ಧಕ್ಕೆ ನಿಲ್ಲುತ್ತೆ ಅಂತ ರಿಯಲ್ ಎಸ್ಟೇಟ್ ಮಾಲೀಕರು ಮನವಿ ಮಾಡಿದ್ರು..  ರೈಲುಗಳಲ್ಲಿ ಊರು ಸೇರಲು ಕಾತುರರಾಗಿದ್ದ ಕಾರ್ಮಿಕರು ಇದೀಗ ಕಂಗಾಲಾಗಿದ್ದು ನಡೆದುಕೊಂಡೆ ಸಾವಿರಾರು ಕಿಲೋ ಮೀಟರ್ ದೂರದ ಊರನ್ನ ತಲುಪಲು ಮುಂದಾಗಿದ್ದಾರೆ. ಈ ಬೆನ್ನಲ್ಲೇ ಕಾರ್ಮಿಕ ಸಂಘಟನೆಗಳು ಯಡಿಯೂರಪ್ಪ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು ರೈಲು ವ್ಯವಸ್ಥೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.. ಈ ನಡುವೆ ತಮ್ಮ ರಾಜ್ಯದ ಜನರನ್ನ ವಾಪಸ್ ಬಿಹಾರಕ್ಕೆ ಸೇರಿಸಿಕೊಳ್ಳಲು ನಿತೀಶ್ ಕುಮಾರ್ ನಿರಾಕರಿಸುತ್ತಿರೋದು ಕಾರ್ಮಿಕ ಸಂಘಟನೆಗಳು ರೊಚ್ಚಿಗೇಳುವಂತೆ ಮಾಡಿದೆ. ತೆಲಂಗಾಣದಿಂದ ಬಿಹಾರಕ್ಕೆ ಕಾರ್ಮಿಕರನ್ನ ಹೊತ್ತು  ತೆರಳಿದ್ದ ಶ್ರಮಿಕ್  ಸ್ಪೆಷಲ್ ರೈಲನ್ನ ನಿತೀಶ್ ಕುಮಾರ್ ವಾಪಸ್ ಕಳುಹಿಸಿದ್ದಾರೆ.. ಕಾರ್ಮಿಕರು ತಮ್ಮೂರಿಗೆ ತಲುಪಿದರೂ ಇಲ್ಲಿ ಇಳಿಯಲಾಗದೆ ವಾಪಸ್ ತೆಲಂಗಾಣಕ್ಕೆ ಮರಳಿದ್ದಾರೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ

- Advertisement -

Latest Posts

Don't Miss