ಪ್ರತಿಭಟನೆ ಹಿಂಪಡೆದ ಕುಸ್ತಿಪಟುಗಳು..!

National story :

ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ಕುಸ್ತಿಪಟುಗಳು ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕುಸ್ತಿಪಟುಗಳೊಂದಿಗೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಪ್ರತಿಭಟನೆ ಹಿಂಪಡೆಯಲು ಕುಸ್ತಿಪಟುಗಳ ತೀರ್ಮಾನಿಸಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ತಾತ್ಕಲಿಕವಾಗಿ ಅಮಾನತುಗೊಳಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಲೈಂಗಿಕ ಕಿರುಕುಳ ವಿರುದ್ಧ ಆರೋಪದ ತನಿಖೆಗೂ ಆದೇಶಿಸಿದ್ದಾರೆ. ಬ್ರಿಜ್ ಭೂಷಣ್‌ಗೆ ತನಿಖೆಗೆ ಸಹಕರಿಸುವಂತೆ ಆದೇಶಿಸಿದ್ದಾರೆ. ತನಿಖಾಧಿಕಾರಿಗಳಿಗೆ 4 ದಿನಗಳಲ್ಲಿ ತನಿಖಾ ವರದಿ ನೀಡಲು ಡೆಡ್ ಲೈನ್ ಕೊಟ್ಟಿದ್ದಾರೆ.

ವಿಜಯಪುರಕ್ಕೆ ಜೆ ಪಿ ನಡ್ಡಾ ಬೇಟಿ

 

“ರಾಜ್ಯದಿಂದ ಟೆಂಟ್ ಕಿತ್ತೊಯ್ಯಬೇಕಾದ ಪರಿಸ್ಥಿತಿ ನಿಮಗೆ ಬರಲಿದೆ”: ಕಟೀಲ್ ಗೆ ಹೆಚ್.ಡಿ.ಕೆ ತಿರುಗೇಟು

ಆಸ್ಪತ್ರೆ ಹೊರಗೆ ಜನ್ಮ ನೀಡಿದಳಾಕೆ..!

About The Author