- Advertisement -
Yamloor News:
ಮಹಾ ಮಳೆಗೆ ಮಹದೇವಪುರ ವಲಯದ ಬಹುತೇಕ ದೇವಸ್ಥಾನ ಪೂಜೆಯಿಲ್ಲದೇ ಜನ ಅಯ್ಯೋ ದೇವರೇ ಎನ್ನುವಂತಾಗಿದೆ. ಮಳೆ ನಿಂತರೂ ಪೂಜೆ ಇಲ್ಲ. ಮಹಾ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಯಮಲೂರಿನ ಗ್ರಾಮ ದೇವರು ಮುನೇಶ್ವರನಿಗೆ ಒಂದು ವಾರದಿಂದ ಪೂಜೆ ಇಲ್ಲ. ದೇಗುಲದ ಆವರಣದಲ್ಲಿ ದೇವರನ್ನು ಮುಳುಗಿಸಿದ ನೀರು ಇಂದು ಖಾಲಿಯಾಗಿದ್ರೂ, ದೇವಸ್ಥಾನದ ಹೊರಭಾಗದಲ್ಲಿ ಕೆಸರು ಹೂಳು ತುಂಬಿಕೊಂಡು ರ್ಚಕರು ಭಕ್ತರು ಹೋಗುವಂತೆ ಇಲ್ಲ. ಹೀಗಾಗಿ ಪೂಜೆಯೂ ಇಲ್ಲ. ಗ್ರಾಮ ದೇವರಿಗೇ ಹೀಗಾಗಿದೆ. ಇನ್ನು ನಮ್ಮ ಪರಿಸ್ಥಿತಿ ಇದಕ್ಕಿಂತಲೂ ಕಡೆಯಾಗಿದೆ ಅಂತಾ ಜನ ಬೇಸರ ವ್ಯಕ್ತಪಡಿಸಿದ್ದಾರೆ.
- Advertisement -