Bengaluru News: ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯ ಸದಸ್ಯತ್ವ ನೊಂದಣಿ ಹಾಗೂ ನೂತನ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಗಳು ತಾಲೂಕು ಜಿಲ್ಲಾ ಹಾಗೂ ರಾಜ್ಯದಂತ ಭರ್ಜರಿಯಾಗಿ ನಡಿತಿದೆ.
ಚುನಾವಣೆಯಲ್ಲಿ ಪಕ್ಷ ನಿಷ್ಠೆ vs ಪಕ್ಷಾಂತರಿ ಅನ್ನುವ ಚರ್ಚೆ ಜೋರಾಗಿದೆ.
ಎಚ್ಎಸ್ ಮಂಜುನಾಥ್ ಪರ ಕಾಂಗ್ರೆಸ್ ನಿಷ್ಠಾವಂತರ ಒಲವು
ಈ ಬಾರಿ ಚುನಾವಣೆಯಲ್ಲಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಎಚ್ಎಸ್ ಮಂಜುನಾಥ್ ರವರು ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಮಧ್ಯಮ ವರ್ಗದಿಂದ ಬಂದಂತ ಇವರು ಎನ್ ಎಸ್ ಯು ಐ ವಿದ್ಯಾರ್ಥಿ ಸಂಘಟನೆಯಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಇವರು ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎರಡು ಬಾರಿ ಎನ್ ಎಸ್ ಯು ವೈ ರಾಜ್ಯಧ್ಯಕ್ಷರಾಗಿ ಯುವ ಕಾಂಗ್ರೆಸ್ನ ಉಪಾಧ್ಯಕ್ಷರಾಗಿ ಕಾರ್ಯಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದು ಇವರದೇ ಆದಂತ ರಾಜ್ಯಾದಂತ ವಿದ್ಯಾರ್ಥಿ ಯುಜನರು ಇವರಿಗೆ ಬೆಂಬಲವಾಗಿ ನಿಂತಿದ್ದಾರೆ.
ಸಿರಿವಂತೆ ದೀಪಿಕಾ ರೆಡ್ಡಿಗೆ ಕಾಂಗ್ರೆಸ್ ನಾಯಕರ ವಿರುದ್ಧದ ಹಳೆಯ ಭಾಷಣವೇ ಮುಳುವು
ಇದೇ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮತ್ತೊಬ್ಬ ಸ್ಪರ್ಧಿ ದೀಪಿಕಾ ರೆಡ್ಡಿ ಆರ್ಥಿಕವಾಗಿ ಪ್ರಬಲರಾಗಿದ್ದಾರೆ. ಆದರೆ ದೀಪಿಕಾ ರೆಡ್ಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಂದೆ ರಾಜಗೋಪಾಲರೆಡ್ಡಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ನೀಡಲಿಲ್ಲ ಎಂದು ಬೇಸರಗೊಂಡು ಜೆಡಿಎಸ್ ಪಕ್ಷಕ್ಕೆ ಹೋಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ, ಸಿದ್ದರಾಮಯ್ಯ ಹಾಗೂ ರಾಜ್ಯ ಮತ್ತು ಕೇಂದ್ರ ನಾಯಕರ ವಿರುದ್ಧ ಭರ್ಜರಿ ಭಾಷಣ ಮಾಡಿದ್ರು. ಆ ವೇಳೆ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ರು. ಆದರೆ ಲೋಕಸಭಾ ಚುನಾವಣೆ ವೇಳೆ ಪುನಃ ಕಾಂಗ್ರೆಸ್ ಪಕ್ಷಕ್ಕೆ ಬಂದು ಇದೀಗ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ನಿಂತಿರುವುದಕ್ಕೆ ನಿಷ್ಠಾವಂತ ಕಾಂಗ್ರೆಸ್ ಯುವ ಕಾರ್ಯಕರ್ತರು ರಾಜ್ಯದ ಅನೇಕ ನಾಯಕರು ಬೇಸರಗೊಂಡಿದ್ದಾರೆ. ಹಾಗಾಗಿ ಪಕ್ಷದ ಸಿದ್ಧಾಂತ ಇಲ್ಲದ ಬದ್ಧತೆ ಇಲ್ಲದ ದೀಪಿಕಾ ರೆಡ್ಡಿಯನ್ನ ಕಾಂಗ್ರೆಸ್ ಯುವ ಕಾರ್ಯಕರ್ತೆಯರು ಕೈಹಿಡಿಯುವುದು ತುಂಬಾ ಕಷ್ಟಕರವಾಗಿದೆ. ಹಾಗಾಗಿ ಪಕ್ಷದ ತತ್ವ ಸಿದ್ಧಾಂತಗಳು ಒಪ್ಪಿ ಬದ್ಧತೆಯಿಂದ ಇಡೀ ರಾಜ್ಯದಲ್ಲಿ ಯುವಜನ ಸಂಘಟನೆ ಮಾಡುತ್ತಿರುವ ಎಚ್ಎಸ್ ಮಂಜುನಾಥ್ ಗೆ ನಿಷ್ಠಾವಂತ ಯುವ ಕಾಂಗ್ರೆಸ್ ಕಾರ್ಯಕರ್ತರು ಎಚ್ಎಸ್ ಮಂಜುನಾಥ್ ಗೌಡ ಪರ ಒಲವು ವ್ಯಕ್ತಪಡಿಸ್ತಿದ್ದಾರೆ.
ಅಂತಿಮವಾಗಿ ಪಕ್ಷ ನಿಷ್ಠೆ vs ಪಕ್ಷಾಂತರಿ ಚರ್ಚೆ ಈ ಬಾರಿಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲುವು ಯಾರದ್ದು ಅನ್ನುವ ಕುತೂಹಲನ್ನ ಹೆಚ್ಚಿಸಿದೆ.
ಪೊಲಿಟಿಕಲ್ ಬ್ಯೂರೋ, ಕರ್ನಾಟಕ ಟಿವಿ, ಬೆಂಗಳೂರು