ಮೈಸೂರು: ಹನುಮ ಜಯಂತಿಯ ದಿನ ಮೆರವಣಿಗೆಯಲ್ಲಿ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಿದಕ್ಕಾಗಿ ಮೈಸೂರು ಜಿಲ್ಲೆಯ ಟಿ ನರಸಿಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ ನಂತರ ಊರಿನವರೆಲ್ಲ ರಾಜಿಸಂಧಾನ ಮಾಡಿಸಿದ್ದಾರೆ. ನಂತರ ಭಾನುವಾರ ಮಾತನಾಡುವುದಾಗಿ ಕರೆಸಿ ಬಾಟಲಿಯಿಂದ ಹೊಡೆದು ಕೊಲೆಮಾಡಿದ್ದಾರೆ.
ಯುವ ಬ್ರಿಗೇಡ್ ಕಾರ್ಯಕರ್ತನಾಗಿರುವ ವೇಣುಗೋಪಾಲ್ ಅವರು ಊರಿನಲ್ಲಿ ಹನುಮ ಜಯಂತಿಯ ಪ್ರಯುಕ್ತ ಗ್ರಾಮಸ್ತರು ಹನುಮನ ಭಾವಚಿತ್ರದ ಜೊತೆ ಪುನಿತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನಿಟ್ಟು ಮೆರವಣಿಗೆ ಮಾಡುತ್ತಿರುವದನ್ನು ವಿರೋಧಿಸಿದ್ದಾನೆ ತಮ್ಮ ತಮ್ಮಲ್ಲೆ ಜಗಳಗಳಾಗಿವೆ ನಂತರ ಗ್ರಾಮಸ್ಥರು ರಾಜಿ ಸಂದಾನ ಮಾಡಿ ಮನೆಗೆ ಕಳುಹಿಸಿದ್ದಾರೆ.
ಆದರೆ ಮಾರನೆ ದಿನ ಭಾನುವಾರ ಮದ್ಯಾಹ್ನ ಇದೇ ವಿಷಯವಾಗಿ ಜಗಳ ನಡೆದಿತ್ತು ಆದರೆ ರಾತ್ರಿ ಪಂಚಾಯಿತಿ ನೆಪದಲ್ಲಿ ಕರೆಸಿ ಬಾಟಿಲಿಯಿಂದ ಇರಿದು ಕೊಲೆ ಮಾಡಿದ್ದಾರೆ. ಎಂದು ವೇಣುಗೋಪಾಲ್ ಪತ್ನಿ ಪೂರ್ಣಿಮ ತಿಳಿಸಿದ್ದಾರೆ. ಈಗಾಗಲೆ ಕೊಲೆ ಪ್ರಕರಣದಲ್ಲಿ ಪೋಲಿಸರು ಸಂದೇಶ್ ಮಣಿಕಂಠ, ಅನಿಲ್,ಶಂಕರ್ ಹ್ಯಾರಿಸ್ ನನ್ನು ಬಂಧಿಸಿದ್ದಾರೆ.ಆರು ಮಂದಿ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ.

