Thursday, March 20, 2025

Latest Posts

ಚೌಕಿದಾರ್ ಚೋರ್ ಹೇಳಿಕೆ- ಬೇಷರತ್ ಕ್ಷಮೆ ಕೋರಿದ ರಾಹುಲ್ ಗಾಂಧಿ

- Advertisement -

ನವದೆಹಲಿ: ‘ಚೌಕಿದಾರ್​ ಚೋರ್​ ಹೈ ಅಂತ ಸುಪ್ರೀಂ ಕೋರ್ಟ್​ ಒಪ್ಪಿಕೊಂಡಿದೆ’ ಅಂತ ಹೇಳಿಕೆ ನೀಡಿ ನೋಟಿಸ್​ ಪಡೆದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಉನ್ನತ ನ್ಯಾಯಾಲಯಕ್ಕೆ ಕ್ಷಮೆ ಕೋರಿದ್ದಾರೆ. ಮೂರು ಪುಟಗಳ ಅಫಿಡವಿಟ್​ ಸಲ್ಲಿಸಿರೋ ರಾಹುಲ್ ಬೇಷರತ್​ ಕ್ಷಮೆ ಯಾಚಿಸಿದ್ದಾರೆ. ಸುಪ್ರೀಂ ಕೋರ್ಟ್​ನ ಆದೇಶವನ್ನು ತಪ್ಪಾಗಿ ವಿವರಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ. ಇದು ನಾನು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಯಲ್ಲ ಅಂತ ರಾಹುಲ್ ಅಫಿಡವಿಟ್​ನಲ್ಲಿ ಹೇಳಿದ್ದಾರೆ.

ರಫೇಲ್ ಹಗರಣ ಕುರಿತ​​​ ಆದೇಶ ಕುರಿತಂತೆ ಉತ್ತರಪ್ರದೇಶದ ಅಮೇಥಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಚೌಕಿದಾರ್​ ಚೋರ್​ ಹೈ ಅನ್ನೋದನ್ನ ಸುಪ್ರೀಂ ಕೋರ್ಟ್​ ಒಪ್ಪಿಕೊಂಡಿದೆ ಅಂತ ಹೇಳಿದ್ದರು.   ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಹೇಳಿಕೆಯನ್ನು ಸುಪ್ರೀಂ ಕೋರ್ಟ್​ ಹೇಳಿಕೆಯೆಂಬಂತೆ ಬಿಂಬಿಸಿದ್ದಾರೆ ಅಂತ ಬಿಜೆಪಿಯ ಮೀನಾಕ್ಷಿ ಲೇಖಿ ಕೋರ್ಟ್​​ ಮೆಟ್ಟಿಲೇರಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್​​ ರಾಹುಲ್ ಗಾಂಧಿಗೆ ವಿವರಣೆ ಕೇಳಿ ನೋಟಿಸ್​ ಜಾರಿ ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ರಾಹುಲ್ ಗಾಂಧಿ, ನಾನು ಈ ಹೇಳಿಕೆ ನೀಡಿದ್ದಕ್ಕೆ ವಿಷಾದಿಸುತ್ತೇನೆ ಅಂತ ಕೋರ್ಟ್​ಗೆ ತಿಳಿಸಿದ್ದರು. ಆದ್ರೆ ಈ ಉತ್ತರ ತೃಪ್ತಿದಾಯಕವಾಗಿಲ್ಲ ಅಂತ ಕೋರ್ಟ್​ ಮತ್ತೊಮ್ಮೆ ನೋಟಿಸ್​ ನೀಡಿತ್ತು. ಈಗ ರಾಹುಲ್ 3 ಪುಟಗಳ ಅಫಿಡವಿಟ್​ನಲ್ಲಿ ಬೇಷರತ್​​ ಕ್ಷಮೆ ಕೇಳಿದ್ದು, ಸುಪ್ರೀಂ ಕೋರ್ಟ್​ ಇದನ್ನು ಸ್ವೀಕರಿಸಿದೆ.

- Advertisement -

Latest Posts

Don't Miss