Political News: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಪಂಚ ನ್ಯಾಯ ಮತ್ತು 25 ಗ್ಯಾರಂಟಿಗಳಿದೆ.
ಕಿಸಾನ್ ನ್ಯಾಯ್, ನಾರಿ ನ್ಯಾಯ್, ಯುವ ನ್ಯಾಯ್, ಶ್ರಮಿಕ್ ನ್ಯಾಯ್, ಹಿಸ್ಸೇದಾರಿ ನ್ಯಾಯ್ ಎಂದು ಪಂಚ ನ್ಯಾಯವನ್ನು ಕಾಂಗ್ರೆಸ್ ಈ ಪ್ರಣಾಳಿಕೆಯಲ್ಲಿ ತಿಳಿಸಿದೆ. ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ, ಬಡ ಮಹಿಳೆಯರಿಗೆ ವರ್ಷಕ್ಕೆ ಲಕ್ಷ ರೂಪಾಯಿ, ಮತ್ತು ಜಾತಿ ಆಧಾರದ ಮೇಲೆ ಜನಗಣತಿ ಮಾಡುವುದಾಗಿ ಗ್ಯಾರಂಟಿ ನೀಡಿದೆ.
ಇಷ್ಟೇ ಅಲ್ಲದೇ, 30 ಲಕ್ಷ ಸರ್ಕಾರಿ ಉದ್ಯೋಗ ಒದಗಿಸುವ ಭರವಸೆ ಕೂಡ ನೀಡಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರಿಗೆ 50 ಪರ್ಸೆಂಟ್ ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಅಲ್ಲದೇ, ತಮ್ಮ ಪ್ರಣಾಳಿಗೆ ಬಡವರಿಗಾಗಿ ಮೀಸಲು ಎಂದು ಕಾಂಗ್ರೆಸ್ ಹೇಳಿದೆ.
ವಿನಾಶ ಕಾಲೇ ವಿಪರೀತ ಬುದ್ಧಿ, ಇದು ಅವರ ಜೀವನದ ತಪ್ಪು ಹೆಜ್ಜೆ: ವಿಜಯೇಂದ್ರ ಹೀಗ್ಯಾಕಂದ್ರು ಗೊತ್ತಾ..?
ಆಪರೇಷನ್ ಹಸ್ತ: 9 ಮಂದಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆ..