Wednesday, June 18, 2025

Latest Posts

ನೀವು ನಮ್ಮನ್ನು ಕೆಣಕಬೇಡಿ ನಮ್ಮ ಜನ ತಿರುಗಿಬಿದ್ದರೆ ನಿಮ್ಮ ಅಡ್ರೆಸ್ ನಿಮಗೆ ಸಿಗಲ್ಲಾ: ಮಲ್ಲಿಕಾರ್ಜುನ ಖರ್ಗೆ

- Advertisement -

Hubli News: ಹುಬ್ಬಳ್ಳಿ: ಬ್ರಿಟಿಷರ ಕೈಯಲ್ಲಿ ಕೆಲಸ ಮಾಡಿದವರು ನಮಗೆ ದೇಶಭಕ್ತಿ ಬಗ್ಗೆ ಹೇಳ್ತಿದ್ದಾರೆ.ದೇಶದ ಬಗ್ಗೆ ಎದೆತಟ್ಟಿ ನಿಂತವರು ಕಾಂಗ್ರೆಸ್ ನವರು. ನೀವು ನಮ್ಮನ್ನು ಕೆಣಕಬೇಡಿ ನಮ್ಮ ಜನ ತಿರುಗಿಬಿದ್ದರೆ ನಿಮ್ಮ ಅಡ್ರೆಸ್ ನಿಮಗೆ ಸಿಗಲ್ಲಾ ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಮಾತನಾಡಿ ಅವರು, ದೇಶದ 72 ರಷ್ಟ ಸಂಪತ್ತು ಶೇಕಡಾ ಹತ್ತರಷ್ಟು ಜನರ ಬಳಿಯಿದೆ. ದೇಶಕ್ಕಾಗಿ ನಾವು ಒಂದಾಗಿ ದುಡಿಯೋಣಾ. ಪ್ರಸಂಗ ಬಂದರೆ ನಮ್ಮ ಜೀವ ಕೊಡೋಣಾ. ಆದ್ರೆ ನಮ್ಮನ್ನು ಹೆದರಿಸೋಕೆ ಹೋಗಬೇಡಿ ಕಾಂಗ್ರೆಸ್ ನವರು ಹೆದರಲ್ಲಾ, ಬಗ್ಗಲ್ಲಾ. ಕಾಂಗ್ರೆಸ್ ಕಾರ್ಯಕರ್ತರು ತಮ್ಮಲ್ಲಿರುವ ಸಣ್ಣ ಪುಟ್ಟ ಮನಸ್ತಾಪ ಮರೆತು ಒಗ್ಗಟ್ಟಬೇಕು. ಜಾತಿ, ಧರ್ಮ, ಪಕ್ಷಗಳಿಂದ ದೇಶ ಮೊದಲು. ದೇಶದ ರಕ್ಷಣಾಗಾಗಿ ಎಲ್ಲರೂ ಒಗ್ಗಟ್ಟಾಗಬೇಕು.

ಮೀಸಲಾತಿ ಪ್ರಮಾಣ ಹೆಚ್ಚಳಮಾಡಬೇಕು. ಕರ್ನಾಟಕ ಮಂತ್ರಿ ಮಂಡಲ ತಯಾರಿದೆ. ಅದಕ್ಕೆ ಕೇಂದ್ರ ಸರ್ಕಾರ ಅಡ್ಡಿ ಬರ್ತಿದೆ.ಪ್ರತಿ ಹತ್ತು ವರ್ಷಕ್ಕೆ ಗಣತಿ ಮಾಡಬೇಕು, ಆದ್ರೆ ಮಾಡಲಿಲ್ಲ. ಮಾಡಿದ್ರೆ ಜನರ ಸ್ಥಿತಿಗತಿ ಗೊತ್ತಾಗುತ್ತದೆ.ಹೀಗಾಗಿ ಅವರು ಗಣತಿ ಮಾಡ್ತಿಲ್ಲಾ,ಅವರು ಮನಸಾಪೂರ್ವಕವಾಗಿ ಗಣತಿ ಮಾಡ್ತಿಲ್ಲಾ, ಮೂರು ತಿಂಗಳೊಳಗಾಗಿ ಮಾಡಬೇಕು. ಮಾಡಿದ್ರೆ ಮಾತ್ರ ಅದು ಮನಸಾಪೂರ್ವಕವಾಗಿರುತ್ತೆ ಎಂದು ಖರ್ಗೆ ಹೇಳಿದ್ದಾರೆ.

ವಿಶೇಷ ಅಧಿವೇಶನ ಕರೆಯಬೇಕು.
ಕಾಶ್ಮೀರದ ಘಟನೆ ಬಗ್ಗೆ ತಿಳಿಸಿ ಅಂತ ಹೇಳಿದ್ದೇವೆ. ಲೋಪದೋಷಗಳು ಏನು ನಡೆದವು ಅಂತ ತಿಳಿಸಬೇಕು. ಮೂರು ರೀತಿಯ ಭದ್ರತೆ ಇದ್ರು ಉಗ್ರರು ಬಂದ್ರು.ಬಂದು ದಾಳಿ ಮಾಡಿ ಪ್ರವಾಸಿಗರನ್ನು ಕೊಂದರು?‌ ಆದ್ರೆ ನಾವು ದೆಹಲಿಗೆ ಹೋಗಿ ಎಲ್ಲಾ ಪಾರ್ಟಿ ಯವರು ಸೇರಿದೆವು,ಆದ್ರೆ ಅದಕ್ಕೆ ಮೋದಿ ಅವರು ಬರಲೇ ಇಲ್ಲಾ,ಅವರು ಬಿಹಾರ ದಲ್ಲಿ ಚುನಾವಣೆ ಭಾಷಣ ಮಾಡ್ತಿದ್ದರು.ಇನ್ನು ಮುಂದಾದ್ರು ಇಂತಹ ಘಟನೆ ನಡೆಯಬಾರದು.ಮೊದಲು ದೇಶ ಮುಖ್ಯ, ಅದಕ್ಕೆ ನಾವೆಲ್ಲರು ಬದ್ಧರಿರಬೇಕು.140 ಕೋಟಿ ಜನ ದೇಶದ್ರೋಹಿಗಳಾ, ಬಿಜೆಪಿಯವರು ಬ್ರಿಟಿಷರ ಜೊತೆಗಿದ್ದರು. ಆದ್ರೆ ದೇಶಕ್ಕೆ ಜೀವ ಕೊಟ್ಟವರು ಕಾಂಗ್ರೆಸ್ ನವರ ಎಂದರು..

- Advertisement -

Latest Posts

Don't Miss