Hubli News: ಹುಬ್ಬಳ್ಳಿ: ತಮ್ಮ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಯಿಂದ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಬೆಲೆ ಏರಿಕೆ ವಿರುದ್ಧ ಇಡೀ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಮಾಡ್ತಿದೆ.ಮೋದಿ ಅವರೂ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ಮೋದಿ ಪ್ರಧಾನಿ ಆದ ಮೇಲೆ ಎಲ್ಲ ರಾಜ್ಯಗಳಲ್ಲಿಯೂ ಬೆಲೆ ಏರಿಕೆ ಆಗಿದೆ. ಅಚ್ಛೇ ದಿನ್ ಆಯೇಗಾ ಅಂದಿದ್ದರು, ಆದ್ರೆ ಒಳ್ಳೆಯ ದಿನಗಳು ಬಂದವಾ ಅನ್ನೋದನ್ನ ಮೋದಿ ಜನತೆಗೆ ಉತ್ತರಿಸಲಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ ಅವರು, ಮನಮೋಹನ್ ಸಿಂಗ್ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಿದ್ದರು. ಬೆಲೆ ಏರಿಕೆಗೆ ಮೋದಿಯೇ ಕಾರಣ. ಡಾಲರ್ ನ್ನು ರೂಪಾಯಿ ಸಮಕ್ಕೆ ತರೋದಾಗಿ ಹೇಳಿದ್ದರು. ಮೋದಿ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಏನಾಗಿದೆ..? ದರ ಏರಿಕೆಗೆ ಯಾರು ಕಾರಣ..? ಮೋದಿ ಅವರಿಗೆ ಮಾನ ಮರ್ಯಾದೆ ಏನಾದ್ರು ಇದೆಯಾ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹಾಲಿನ ದರ ಏರಿಕೆ ಮಾಡಿದ್ದು ನಿಜ. ಏರಿಸಿದ ದರವನ್ನು ನೇರವಾಗಿ ರೈತರಿಗೆ ವರ್ಗಾವಣೆ ಮಾಡಿದ್ದೇವೆ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದ್ರೆ, ಕರ್ನಾಟಕದಲ್ಲಿ ಹಾಲು, ಬಸ್ ಟಿಕೆಟ್ ದರ ಕಡಿಮೆ ಇದೆ ನೀವು ನಮಗೇನು ಹೇಳ್ತಿರಿ..? ಗ್ಯಾರಂಟಿ ನೆಪದಲ್ಲಿ ಸರ್ಕಾರದ ಖಜಾನೆ ಖಾಲಿ ಆಗಿದೆ ಅಂತ ಆರೋಪಿಸ್ತಾರೆ.
ಜಾತಿ ಗಣತಿ ಬಗ್ಗೆ ಮಾತನಾಡಲ್ಲ . 2023 ರಲ್ಲಿಯೇ ಖರ್ಗೆ ಮೋದಿಗೆ ಪತ್ರ ಬರೆದಿದ್ದರು. 75 ವರ್ಷದಿಂದಲೂ ಬಡತನ ನಿರ್ಮೂಲನೆ ಆಗಿಲ್ಲ ಸಾಮಾಜಿಕ ಸಮಾನತೆ ಬಂದಿಲ್ಲ .ಹೀಗಾಗಿ ಆರ್ಥಿಕ, ಶೈಕಣಿಕ, ಸಾಮಾಜಿಕ ಸಮೀಕ್ಷೆ ಮಾಡಬೇಕು. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಶೇ 10 ರಷ್ಟು ಮೀಸಲಾತಿ ಹೆಚ್ಚಿಸಿರೊದ್ರಿಂದ ಶೇ 50 ರ ಮಿತಿ ದಾಟಿಲ್ಲವೇ..? ಬೆಲೆ ಏರಿಕೆ ಮಾಡಿದ್ದು ಬಿಜೆಪಿಯ ಕೇಂದ್ರ ಸರ್ಕಾರ ಅಂತ ಧೈರ್ಯದಿಂದ ಹೇಳಿ ಅಂತ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ..