Wednesday, June 18, 2025

Latest Posts

Mangaluru Crime News: ಸುಹಾಸ್ ಹತ್ಯೆ ಬೆನ್ನಲೇ ಫಿನೀಶ್ ಎಂಬ Post ಬಹಿರಂಗ

- Advertisement -

Mangaluru Crime News: ಸದ್ಯ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿರುವ ಸುದ್ದಿ ಎಂದರೆ, ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ, ಈ ಮುನ್ನ ನಡೆದಿದ್ದ Praveen Nettaru ಹತ್ಯೆ ಸೇಡಿಗಾಗಿ ಇದೇ ಸುಹಾಸ್ ಮತ್ತು ಸಹಚರರು ಸೇರಿ, ಫಾಜಿಲ್ ಎಂಬಾತನನ್ನು 2022 ಜುಲೈ 28ರಂದು ಹತ್ಯೆ ಮಾಡಿದ್ದರು. ಅದಾದ ಬಳಿಕ ಜೈಲು ಸೇರಿದ್ದ ಸುಹಾಸ್, 1 ವರ್ಷ ಜೈಲಿನಲ್ಲಿದ್ದು, ಬಳಿಕ ಬೇಲ್ ಪಡೆದು ಬಂದು, ಜಾಲಿಯಾಗಿದ್ದ.

ಆದರೆ ಆತನನ್ನು ಮುಗಿಸಬೇಕು ಎಂದು ಸಜ್ಜಾಗಿದ್ದ ಗುಂಪು ನಿನ್ನೆ ಸುರತ್ಕಲ್ ಬಳಿ ಮೀನು ಮಾರುವ ಗಾಡಿಯಲ್ಲಿ ಅವಿತುಕುಳಿತು, ಸುಹಾಸ್ ಚಲಿಸುತ್ತಿದ್ದ ಗಾಡಿಗೆ ಡಿಕ್ಕಿ ಹ“ಡೆದಿದ್ದಾರೆ. ಗಾಡಿ ಡಿಕ್ಕಿಯಾದ ರಭಸಕ್ಕೆ ಸುಹಾಸ್ ಕಾರ್ ಸಲೂನ್ ಶಾಪ್‌ಗೆ ನುಗ್ಗಿದೆ. ಬಳಿಕ ನಡು ರಸ್ತೆಯಲ್ಲಿ ಸುಹಾಸ್‌ನನ್ನು ಮಚ್ಚು, ಲಾಂಗ್‌ಗಳಿಂದ ಹತ್ಯೆ ಮಾಡಲಾಗಿದೆ. ಬಳಿಕ ಸುಹಾಸ್‌ನನ್ನು ಸ್ಥಳೀಯರು ಮಂಗಳೂರಿನ ಎಜೆ ಆಸ್ಪತ್ರೆಗೆ ಸೇರಿಸಿದರೂ, ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಸುಹಾಸ್ ಹತ್ಯೆಗೆ ಹಲವರು ಸಾಥ್ ನೀಡಿದ್ದಾರೆ: ಹರೀಶ್ ಪೂಂಜಾ
ಈ ಬಗ್ಗೆ ಹಿಂದೂ ಸಂಘ’’ನೆ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು , ಬಿಜೆಪಿ ನಾಯಕರು ತೀವ್ರ ಆಕ್ರೋಶ ಹ`ರಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ಹರೀಶ್ ಪೂಂಜಾ, ಸುಹಾಸ್‌ ಬೇಲ್ ಪಡೆದು ಬಂದ ಬಳಿಕ, ಅವನಿಗೆ ಯಾವುದೇ ಶಸ್ತ್ರಾಸ್ತ್ರವನ್ನು ಇರಿಸಿಕಳ್ಳಲು ಅವಕಾಶ ನೀಡಿರಲಿಲ್ಲ. ಪೋಲೀಸರು ಯಾವುದೇ ಶಸ್ತ್ರಾಸ್ತ್ರ ಇರಿಸಿಕ`ಳ್ಳಬಾರದು ಎಂದು ಹೇಳಿದ್ದರು. ಅವನ ಬಳಿ 1 ಕೋಲು ಇದ್ದಿದ್ದರೂ ಆತ ಬದುಕಿ ಉಳಿಯುತ್ತಿದ್ದನೆನೋ, ಇದೆಲ್ಲ ಪ್ಲಾನ್ ಮಾಡಿಯೇ ಮಾಡಿರುವುದು ಎಂದು ಪೂಂಜಾ ಆರೋಪಿಸಿದ್ದಾರೆ.

ಮಾರ್ಚ್ 31ರಂದು ನಡೆದಿತ್ತಾ ಸುಹಾಸ್ ಹತ್ಯೆಗೆ ಪ್ಲಾನ್..?
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿರುವ Post, ಹಲವು ಅನುಮಾನಗಳಿಗೆ ಎಡೆ ಮಾಡಿಕ` ಟ್ಟಿದೆ. ಏಕೆಂದರೆ Troll Mayadiaka ಎನ್ನುವ ಪೇಜಿನಲ್ಲಿ ಮಾರ್ಚ್ 31ಕ್ಕೆ ಸುಹಾಸ್ Photo ಹಾಕಿ, ಶೀಘ್ರದಲ್ಲೇ ಸೇಡು ತೀರಿಸಿಕ“ಳ್ಳುತ್ತೇವೆ ಅನ್ನೋ ರೀತಿ ಹೇಳಲಾಗಿತ್ತು. ಅಲ್ಲದೇ, ಸುಹಾಸ್ ಹತ್ಯೆ ನಡೆದ ಕೆಲ ನಿಮಿಷಗಳಲ್ಲೇ ಫಿನಿಶ್ ಎಂದು ಬರೆಯಲಾಗಿತ್ತು. ಹೀಗಾಗಿ ಇದು ತುಂಬ ದಿನಗಳಿಂದ ಪ್ಲಾನ್ ಮಾಡಿ, ಮಾಡಿದ ಹತ್ಯೆ ಅಂತಾ ನಿಖರವಾಗುತ್ತದೆ.

‘’Waiting for next wicket..’’
ಇನ್ನು ಹಲವು Instagram account ನಲ್ಲಿ ಈ ಹತ್ಯೆಯ ವೀಡಿಯೋವನ್ನು ಹಾಕಿ ಸಂಭ್ರಮಿಸಲಾಗಿದೆ. ಅಲ್ಲದೆ, ‘’Waiting for next wicket..’’ ಎಂದು ಬರೆಯಲಾಗಿದೆ.

ಯಾರು ಈ ಸುಹಾಸ್ ಶೆಟ್ಟಿ..?
ಸುಹಾಸ್ ಹಿಂದೂ ಸಂಘ’’ನೆ ಕಾರ್ಯಕರ್ತನಾಗಿದ್ದ. ಈ ಹಿಂದೆ ಭಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ. ಸುಹಾಸ್ ವಿರುದ್ಧ 5 ಕೇಸ್‌ಗಳಿದ್ದವು, ಹತ್ಯೆ ಕೇಸ್ , ಹತ್ಯೆ ಪ್ರಯತ್ನನದ ಕೇಸ್‌ಗಳಿದ್ದವು. ಫಾಜೀಲ್ ಕೇಸ್‌ನಲ್ಲಿ ಸುಹಾಸ್ ಎ1 ಆರೋಪಿಯಾಗಿದ್ದ. ಬಂಟ್ವಾಳದ ನಿವಾಸಿಯಾಗಿರುವ ಸುಹಾಸ್ ಅಪ್ಪ ಅಮ್ಮನಿಗೆ ಓಬ್ಬನೇ ಮಗ. ಅಲ್ಲದೇ, ಸುಹಾಸ್ ದುಡಿದರಷ್ಟೇ ಮನೆಗೆ ಅನ್ನ. ಅಪ್ಪ ಅಮ್ಮ ಅನಾರೋಗ್ಯಕ್ಕೀಡಾಗಿದ್ದಾರೆ. ಇದೀಗ ಇರುವ ಓರ್ವ ಮಗನನ್ನು ಕಳೆದುಕ“ಂಡ ಸುಹಾಸ್ ಅಪ್ಪ ಅಮ್ಮ ಅನಾಥವಾಗಿದ್ದಾರೆ.

ಜನಸಾಮಾನ್ಯರನ್ನು ರಕ್ಷಿಸಲು ಆಗದಿದ್ದರೆ ನಿಮ್ಮ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು?

ರಾಜ್ಯದಲ್ಲಿ ತುಷ್ಟೀಕರಣ ಸರ್ಕಾರದಿಂದಾಗಿ ಕಾನೂನು ಸುವ್ಯವಸ್ಥೆ ನಶಿಸುತ್ತಿದೆ. ಮತಾಂಧರಿಂದ ಹಿಂದೂಗಳ ಹತ್ಯೆ, ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಎಲ್ಲೆ ಮೀರಿದೆ. ಹಿಂದೂಗಳು ರಕ್ಷಣೆ ಪಡೆದು ಓಡಾಡುವಂತಹ ವಿಷಮ ಪರಿಸ್ಥಿತಿ ಎದುರಾಗಿದೆ. ನಿನ್ನೆ ರಾತ್ರಿ ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಭಯಾನಕವಾಗಿದೆ. ಅಮಾನವೀಯ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರೇ, ಭಯೋತ್ಪಾದನಾ ವಿಷಯದಲ್ಲಿ ಶಾಂತಿದೂತರಾಗಲು ಹೊರಟ ತಾವು, ರಾಜ್ಯದಲ್ಲಿ ಏಕೆ ಅದನ್ನು ಅನುಸರಿಸುತ್ತಿಲ್ಲ? ತಮ್ಮ ಆಡಳಿತದಲ್ಲಿ ಶಾಂತಿ ಸುವ್ಯವಸ್ಥೆ ಅನ್ನೋದು ಸಂಪೂರ್ಣ ನೆಲಕಚ್ಚಿದೆ. ಜನಸಾಮಾನ್ಯರನ್ನು ರಕ್ಷಿಸಲು ಆಗದಿದ್ದರೆ ನಿಮ್ಮ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು? ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

ಇದು ಕಾಂಗ್ರೆಸ್‌ನ ಪ್ರೋತ್ಸಾಹವೇ..? ಅಥವಾ ನಿರ್ಲಕ್ಷ್ಯವೇ..?
ಮಂಗಳೂರಿನಲ್ಲಿ ನಡೆದ ಕೋಮು ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಕೊಲೆಯ ಘಟನೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಡಿ ಕಾನೂನು ಮತ್ತು ಸುವ್ಯವಸ್ಥೆ ದಿನೇ ದಿನೇ ದುರ್ಬಲಗೊಳ್ಳುತ್ತಿದೆ ಎಂದು ತೋರಿಸುತ್ತದೆ. ರಾಜ್ಯದ ಸುರಕ್ಷತೆ ಅಪಾಯದಲ್ಲಿರುವುದು ತುಂಬಾ ದುರದೃಷ್ಟಕರ. ಕೋಮು ಹಿಂಸಾಚಾರಕ್ಕೆ ಕಾಂಗ್ರೆಸ್ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆಯೇ ಅಥವಾ ಅವರನ್ನು ನಿರ್ಲಕ್ಷಿಸುತ್ತಿದೆಯೇ? ಎಂದು ನಿಖಿಲ್ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss