Sunday, June 22, 2025

Latest Posts

ಭಾರತ – ಪಾಕ್‌ ಯುದ್ಧದ ಸಂದರ್ಭದಲ್ಲಿ : ಬಾಂಗ್ಲಾ ತಲೆಯಲ್ಯಾಕೆ ಈ ದುರಾಲೋಚನೆ..? 

- Advertisement -

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಅಮಯಾಕ ಪ್ರವಾಸಿಗರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ತಮ್ಮ ದೇಶವು ಭಾರತದ ಏಳು ಈಶಾನ್ಯ ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು ಎಂದು ಬಾಂಗ್ಲಾದೇಶದ ನಿವೃತ್ತ ಮೇಜರ್ ಜನರಲ್ ಎಎಲ್‌ಎಂ ಫಜ್ಲುರ್ ರೆಹಮಾನ್ ಸಲಹೆ ನೀಡಿದ್ದಾರೆ.

ಬಾಂಗ್ಲಾದೇಶ ರೈಫಲ್ಸ್ ನ ಮಾಜಿ ಮುಖ್ಯಸ್ಥ, ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರಿಗೆ ಆಪ್ತನಾಗಿರುವ ರೆಹಮಾನ್, ಈ ದುರಾಲೋಚನೆಯ ಗುರಿಯನ್ನು ಸಾಧಿಸಲು ಚೀನಾದೊಂದಿಗೆ ಕೈಜೋಡಿಸೋಣ ಎಂದು ಹೇಳಿದ್ದಾರೆ. ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಬಾಂಗ್ಲಾದೇಶ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ, ಚೀನಾದೊಂದಿಗೆ ಜಂಟಿ ಮಿಲಿಟರಿ ವ್ಯವಸ್ಥೆ ಕುರಿತು ಚರ್ಚೆಗಳನ್ನು ಪ್ರಾರಂಭಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ ಎಂದು ರೆಹಮಾನ್ ತನ್ನ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬಂಗಾಳಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.

ಭಾರತೀಯರ ಆಕ್ರೋಶಕ್ಕೆ ಕಾರಣವಾಯ್ತು ರೆಹಮಾನ್ ಕೆಟ್ಟ ಆಲೋಚನೆ..

ಮುಖ್ಯವಾಗಿ ಬಾಂಗ್ಲಾದಲ್ಲಿನ ರಾಜಕೀಯ ಅಸ್ಥಿರತೆಯ ಬಳಿಕ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಆಶ್ರಯ ಕೋರಿ ಭಾರತಕ್ಕೆ ಪಲಾಯನ ಮಾಡಿದ್ದರು. ನಂತರದ ದಿನಗಳಲ್ಲಿ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ಹಾಗೂ ಅವರ ಕೊಲೆಗಳು ನಡೆಯುತ್ತಿವೆ ಎಂಬ ಭಾರತ ಆತಂಕ ವ್ಯಕ್ತಪಡಿಸಿತ್ತು. ಆದರೆ ಭಾರತ ಮತ್ತು ಬಾಂಗ್ಲಾ ದೇಶದ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ ರೆಹಮಾನ್‌ರ ಈ ಕೆಟ್ಟ ಆಲೋಚನೆಯ ಮಾತು ಭಾರತೀಯರನ್ನು ಇನ್ನಷ್ಟು ಕೆರಳಿಸಿದೆ.

ಭಾರತಕ್ಕೆ ವಿಸ್ತರಣಾವಾದದಲ್ಲಿ ನಂಬಿಕೆ ಇಲ್ಲ..

ಇನ್ನೂ ಕಳೆದ ಮಾರ್ಚ್‌ ತಿಂಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೊಹಮ್ಮದ್ ಯೂನಸ್ ಭಾರತದ ಈಶಾನ್ಯ ರಾಜ್ಯಗಳ ಕುರಿತು ಹೇಳಿಕೆ ನೀಡಿದ್ದಾಗ ಉದ್ವಿಗ್ನತೆ ಭಾರತದಲ್ಲಿ ಅವರ ವಿರುದ್ಧ ಆಕ್ರೋಶಗಳು ಹೆಚ್ಚಾಗಿದ್ದವು. ಭಾರತದ ಪೂರ್ವ ಭಾಗವಾದ ಏಳು ರಾಜ್ಯಗಳನ್ನು ದಿ ಸೆವೆನ್ ಸಿಸ್ಟರ್ಸ್ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ. ಅವು ಭಾರತದ ಭೂಕುಸಿತ ಪ್ರದೇಶ. ಅವುಗಳಿಗೆ ಸಾಗರವನ್ನು ತಲುಪಲು ಯಾವುದೇ ಮಾರ್ಗವಿಲ್ಲ ಎಂದು ಯೂನಸ್ ಆಗ ಹೇಳಿಕೆ ನೀಡಿದ್ದರು. ಅಲ್ಲದೆ ಬಾಂಗ್ಲಾದೇಶವನ್ನು ಈ ಪ್ರದೇಶದಲ್ಲಿನ ಏಕೈಕ ಸಾಗರ ರಕ್ಷಕ ಎಂದು ಕರೆಯುವ ದುಸ್ಸಾಹಸ ಮಾಡಿದ್ದರು. ಹೀಗಾಗಿ ಇದು ಚೀನಾದ ಆರ್ಥಿಕತೆಯ ವಿಸ್ತರಣೆಯ ಒಂದು ದೊಡ್ಡ ಅವಕಾಶವಾಗಬಹುದು ಎಂದು ಆಸಸೆ ತೋರಿಸುವ ಕೆಲಸ ಮಾಡಿದ್ದರು.

ಇದಾದ ಬಳಿಕ ಏಪ್ರಿಲ್‌ ತಿಂಗಳಲ್ಲಿ 6ನೇ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಭಾಗವಹಿಸಲು ಥೈಲ್ಯಾಂಡ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ, ಭಾರತವು ವಿಸ್ತರಣಾವಾದದಲ್ಲಿ ನಂಬಿಕೆಯಿಟ್ಟಿಲ್ಲ, ಅಭಿವೃದ್ಧಿ-ವಾದ, ನೀತಿಯಲ್ಲಿ ನಂಬಿಕೆ ಇಡುತ್ತದೆ ಎಂದು ಹೇಳುವ ಮೂಲಕ ಸಭೆಯಲ್ಲಿದ್ದ ಯೂನಸ್‌ಗೆ ತೀಕ್ಷ್ಣವಾಗಿಯೇ ತಿರುಗೇಟು ನೀಡಿದ್ದರು.

ಭಾರತ ತನ್ನ ಜವಾಬ್ದಾರಿ ಅರಿತುಕೊಂಡಿದೆ..

ಯೂನಸ್‌ ಈ ಹೇಳಿಕೆಯು ಭಾರತವನ್ನು ಸಿಡಿದೇಳುವಂತೆ ಮಾಡಿತ್ತು, ಬಿಜೆಪಿಯ ಅನೇಕ ನಾಯಕರು ಈ ಹೇಳಿಕೆಯನ್ನು ಖಂಡಿಸಿದ್ದರು. ಅಲ್ಲದೆ ನಿರ್ದಿಷ್ಟವಾಗಿ ನಮ್ಮ ಈಶಾನ್ಯ ಪ್ರದೇಶವು ಬಿಮ್‌ಸ್ಟೆಕ್‌ಗೆ ಸಂಪರ್ಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ರಸ್ತೆಗಳು, ರೈಲ್ವೆಗಳು, ಜಲಮಾರ್ಗಗಳು, ಗ್ರಿಡ್‌ಗಳು ಮತ್ತು ಪೈಪ್‌ಲೈನ್‌ಗಳ ಅಸಂಖ್ಯಾತ ಅಭಿವೃದ್ದಿಯ ಜಾಲವನ್ನು ಹೊಂದಿದೆ. ಈ ಬಿಮ್‌ಸ್ಟೆಕ್ ಸಂದರ್ಭದಲ್ಲಿ ಭಾರತವು ತನ್ನ ವಿಶೇಷ ಜವಾಬ್ದಾರಿಯ ಬಗ್ಗೆ ಅರಿತುಕೊಂಡಿದೆ ಎಂದು ಏಪ್ರಿಲ್‌ನಲ್ಲಿ ನಡೆದಿದ್ದ ಬಿಮ್‌ಸ್ಟೆಕ್‌ನ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಯೂನಸ್‌ಗೆ ತಿರುಗೇಟು ನೀಡಿದ್ದರು.

ಇನ್ನೂ ಪ್ರಮುಖವಾಗಿ ಯೂನಸ್ ಹೇಳಿಕೆ ನೀಡಿದ ಕೆಲವು ದಿನಗಳ ನಂತರ, ಸರಕು ಸಾಗಣೆಗೆ ಹೆಚ್ಚುತ್ತಿರುವ ದಟ್ಟಣೆಯನ್ನು ಉಲ್ಲೇಖಿಸಿ, ಬಾಂಗ್ಲಾದೇಶದ ರಫ್ತು ಸರಕುಗಳನ್ನು ಭಾರತದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಮೂಲಕ ಇತರ ದೇಶಗಳಿಗೆ ಸಾಗಿಸಲು ಸುಮಾರು ಐದು ವರ್ಷಗಳಷ್ಟು ಹಳೆಯದಾಗಿದ್ದ ಒಪ್ಪಂದವನ್ನು ಭಾರತ ರದ್ದುಗೊಳಿಸುವ ಮೂಲಕ ಯೂನಸ್‌ಗೆ ಶಾಕ್‌ ನೀಡಿತ್ತು. ಇದೀಗ ಒಳಗೊಳಗೆಯೇ ಪಾಕಿಸ್ತಾನವನ್ನು ಬಾಂಗ್ಲಾ ಬೆಂಬಲ ನೀಡುತ್ತಿದೆ, ಅಲ್ಲದೆ ಚೀನಾ ರಣಹೇಡಿಗಳ ಜೊತೆ ಸೇರಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಭಾರತವನ್ನು ತನ್ನ ಕುತಂತ್ರದಿಂದ ದುರ್ಬಲಗೊಳಿಸುವ ನೀಚ ಕೃತ್ಯಕ್ಕೆ ಬಾಂಗ್ಲಾ ಕೈ ಹಾಕಿದ್ದು, ಭಾರತವನ್ನು ಕೆಣಕಿ ತಕ್ಕ ಶಾಸ್ತಿ ಮಾಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಂತೆ ಕಂಡು ಬರುತ್ತಿದೆ.

- Advertisement -

Latest Posts

Don't Miss