Thursday, June 19, 2025

Latest Posts

ಪಾಕ್‌ ಕೊಳಕು ರಾಷ್ಟ್ರ : ಖ್ವಾಜಾ ಬಳಿಕ ಮತ್ತೆ ಸಾಬೀತು ಮಾಡಿದ ಭುಟ್ಟೋ..!

- Advertisement -

ನವದೆಹಲಿ : ನಾವು ಭಯೋತ್ಪಾದಕರನ್ನು ಕಳೆದ ಮೂರು ದಶಕಗಳಿಂದ ಭಯೋತ್ಪಾದಕ ಗುಂಪುಗಳಿಗೆ ಧನಸಹಾಯ ಮತ್ತು ಬೆಂಬಲ ಸೇರಿದಂತೆ ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ ಪಾಕಿಸ್ತಾನದ ಪಾಲ್ಗೊಳ್ಳುವಿಕೆಯನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದರು. ನಾವು ಸುಮಾರು ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ. ಇದರಿಂದ ನಾವು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಹೇಳಿದ್ದರು. ಇದಾದ ಬಳಿಕ ಪಾಕಿಸ್ತಾನದ ಇನ್ನೋರ್ವ ನಾಯಕ ತಾವು ಈ ನೀಚ ಕೃತ್ಯವನ್ನು ಬಹಿರಂಗವಾಗಿಯೇ ಒಪ್ಪಿಕೊಳ್ಳುವ ಮೂಲಕ ಪಾಕಿಗಳ ನಿಜ ಬಣ್ಣ ಬಯಲಿಗೆ ತರುವ ಕೆಲಸ ಮಾಡಿದ್ದಾರೆ.

ಈಗಿಲ್ಲ, ಅದು ಇತಿಹಾಸವಾಗಿದೆ

ಈ ಕುರಿತು ಖುದ್ದು ಮಾತನಾಡಿರುವ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಹಾಗೂ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ಅಧ್ಯಕ್ಷ ಬಿಲಾವಲ್‌ ಭುಟ್ಟೋ ಜರ್ದಾರಿ, ಇತಿಹಾಸದ ಬಗ್ಗೆ ಹೇಳುವುದಾದರೆ ಪಾಕಿಸ್ತಾನಕ್ಕೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂಬುದು ರಹಸ್ಯವೇನಲ್ಲ ಅದು ಇತಿಹಾಸವಾಗಿದೆ. ಆದರೆ ಇಂದು ನಾವು ಅದರಲ್ಲಿ ಭಾಗಿಯಾಗಿಲ್ಲ. ಇದು ನಮ್ಮ ಇತಿಹಾಸದ ದುರದೃಷ್ಟಕರ ಭಾಗವಾಗಿದೆ ಎಂಬುದು ನಿಜ ಎಂದು ಹೇಳುವ ಮೂಲಕ ಉಗ್ರವಾದವನ್ನು ಪೋಷಿಸುವುದಾಗಿ ಒಪ್ಪಿಕೊಂಡಿದ್ದಾರೆ.

ಉಗ್ರವಾದದಿಂದ ಹಲವು ಪರಿಣಾಮ ಎದುರಿಸಿದ್ದೇವೆ..

ಅಲ್ಲದೆ ಈ ಭಯೋತ್ಪಾದನೆಗೆ ಬೆಂಬಲ ನೀಡಿದ್ದಕ್ಕಾಗಿ ಪಾಕಿಸ್ತಾನ ಸಾಕಷ್ಟು ಅನುಭವಿಸಿದೆ. ಉಗ್ರವಾದದಿಂದ ಹಲವು ಪರಿಣಾಮಗಳನ್ನು ಎದುರಿಸಿದ್ದೇವೆ. ನಾವು ಅನುಭವಿಸಿದ ಭೀಕರತೆಗಳಿಂದ ಸಾಕಷ್ಟು ಪಾಠಗಳನ್ನು ಸಹ ಕಲಿತಿದ್ದೇವೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಆಂತರಿಕ ಸುಧಾರಣೆಗಳ ದಾರಿ ತುಳಿದಿದ್ದೇವೆ. ಇದು ಇತಿಹಾಸದ ದುರದೃಷ್ಟಕರ ಭಾಗವಾಗಿದೆ ಎಂಬುದು ನಿಜ ಎಂದು ಭುಟ್ಟೋ ಹೇಳಿದ್ದಾರೆ.

ಉಗ್ರರ ದಾಳಿಯಲ್ಲಿ ತಮ್ಮ ದೇಶದ ಪಾತ್ರ ಇಲ್ಲ..

ಈ ಮೊದಲು ನಮಗೂ ಹಾಗೂ ಭಯೋತ್ಪಾದಕರಿಗೂ ಸಂಪರ್ಕ, ಸಂಬಂಧವಿದ್ದದ್ದು ನಿಜವಾಗಿದೆ. ಆದರೆ ಈಗಿನ ಉಗ್ರರ ದಾಳಿಯಲ್ಲಿ ತಮ್ಮ ದೇಶದ ಪಾತ್ರ ಇಲ್ಲ ಎಂದು ತಿಳಿಸಿದ್ದಾರೆ. ‘ಪಾಕಿಸ್ತಾನ ಶಾಂತಿಯುತ ರಾಷ್ಟ್ರ, ಅದು ಶಾಂತಿ ಬಯಸುತ್ತದೆ. ಇಸ್ಲಾಂ ಶಾಂತಿಯುತ ಧರ್ಮ, ನಮಗೆ ಯುದ್ಧ ಬೇಡ, ಆದರೆ ಯಾರಾದರೂ ನಮ್ಮ ಸಿಂಧೂ ನದಿ ಮೇಲೆ ದಾಳಿ ಮಾಡಿದರೆ ಅವರು ಯುದ್ಧಕ್ಕೆ ಸಿದ್ಧರಾಗಿರಬೇಕು. ನಾವು ಯುದ್ಧದ ಡ್ರಮ್ ಬಾರಿಸುವುದಿಲ್ಲ. ಆದರೆ ನಮ್ಮನ್ನು ಪ್ರಚೋದಿಸಿದರೆ ಪ್ರತಿಕ್ರಿಯಿಸಲು ಹಿಂಜರಿಯುವುದಿಲ್ಲ, ಅಖಂಡ ಪಾಕಿಸ್ತಾನದ ಘರ್ಜನೆ ಅವರನ್ನು ಕಿವುಡರನ್ನಾಗಿಸುತ್ತದೆ ಎಂದು ಪಕ್ಷದ ಸಭೆಯೊಂದರಲ್ಲಿ ಭುಟ್ಟೋ ಬೊಗಳೆ ಬಿಟ್ಟಿದ್ದಾರೆ.

ಭುಟ್ಟೋ ಒಬ್ಬ ಬಚ್ಚಾ ಎಂದಿದ್ದ ಓವೈಸಿ..

ಇನ್ನೂ ಪಹಲ್ಗಾಮ್‌ ದಾಳಿಯಾದ ಬೆನ್ನಲ್ಲೇ ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಟ್ಟ ಬಳಿಕ ಸಿಂಧೂ ನದಿಯ ದಡದ ಮೇಲೆ ನಿಂತು ಭಾರತಕ್ಕೆ ಬೆದರಿಕೆ ಹಾಕುವ ಕೆಲಸ ಮಾಡಿದ್ದರು. ಅಲ್ಲದೆ ಭಾರತ ಸಿಂಧೂ ನದಿ ನೀರನ್ನು ತಡೆದರೆ, ಪಾಕಿಸ್ತಾನಕ್ಕೆ ಭಾರತೀಯರ ರಕ್ತ ಹರಿಯುತ್ತದೆ ಎಂದು ಭಂಡತನ ತೋರಿದ್ದರು. ಇದಕ್ಕೆ ಸರಿಯಾಗಿಯೇ ಕೌಂಟರ್‌ ನೀಡಿದ್ದ ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ, ಭುಟ್ಟೋ ಒಬ್ಬ ಬಚ್ಚಾ, ಪಾಪ ಅವನಿಗೆ ತನ್ನ ತಾನು ತಾಯಿಯನ್ನು ಕೊಂದಿದ್ದು ಭಯೋತ್ಪಾದಕರೇ ಎನ್ನುವುದು ಗೊತ್ತಿಲ್ಲ ಅಂತ ಕಾಣುತ್ತದೆ. ಮೊದಲು ಅವನು ಅದರ ಬಗ್ಗೆ ತಿಳಿದುಕೊಳ್ಳಲಿ ಎನ್ನುವ ಮೂಲಕ ಓವೈಸಿ ಬಿಲಾವಲ್‌ ಭುಟ್ಟೋ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ಬಳಿಕ ನಾಪತ್ತೆಯಾಗಿದ್ದ ಭುಟ್ಟೋ ಮತ್ತೆ ಪ್ರತ್ಯಕ್ಷವಾಗಿ ಭಾರತದ ವಿರುದ್ಧ ತಮ್ಮ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭುಟ್ಟೋ ಈ ಹೇಳಿಕೆಗೆ ಮತ್ತೊಮ್ಮೆ ಓವೈಸಿ ಏನು ತಿರಿಗೇಟು ನೀಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

- Advertisement -

Latest Posts

Don't Miss