Wednesday, June 18, 2025

Latest Posts

ಅಹಮದಾಬಾದ್‌ನಲ್ಲಿ ವಿಮಾನ ಪತನ: 10 ನಿಮಿಷ ತಡವಾಗಿದ್ದಕ್ಕೆ ಬದುಕುಳಿದ ಭೂಮಿ

- Advertisement -

National News: ನಾವೆಷ್ಟೇ ಪ್ರಯತ್ನ ಪಟ್ಟರೂ, ಏನೇ ಮಾಡಿದರೂ, ಕಾಲ ಕರೆದಾಗ, ಅವನ ಕರೆಗೆ ಓಗೋಟ್ಟು ಹೋಗಲೇಬೇಕು. ಅದೇ ರೀತಿ ನಿನ್ನೆ ಖುಷಿ ಖುಷಿಯಾಗಿ ಲಂಡನ್‌ಗೆ ಹೋಗುತ್ತಿದ್ದವರು, ವಿಮಾನ ಪತನದಲ್ಲಿ ಸಾವನ್ನಪ್ಪಿದ್ದಾರೆ. ಕ್ಯಾಂಟೀನ್‌ನಲ್ಲಿ ಊಟಕ್ಕೆ ಕುಳಿತವರು, ಅಂಗಡಿಯ ಪಕ್ಕ ನಿಂತವರು ಹೀಗೆ ಅನ್ನದ ಋಣ ಮುಗಿದವರೆಲ್ಲ ಇಹಲೋಕ ತ್ಯಜಿಸಿದ್ದಾರೆ. ಆದರೆ ಅನ್ನದ ಋಣ ಇನ್ನೂ ಬಾಕಿ ಇದ್ದು, ಆಯುಷ್ಯ ಗಟ್ಟಿಯಾಗಿದ್ದವರು, ಪವಾಡ ಸದೃಶ ಎಂಬಂತೆ ಬದುಕಿದ್ದಾರೆ.

ನಿನ್ನೆ ಅಹಮದಾಬಾದ್‌ನಲ್ಲಿ ಪ್ಲೇನ್ ಕ್ರ್ಯಾಶ್ ಆಗಿ, 240ಕ್ಕೂ ಹೆಚ್ಚು ಜನ ಮೃತವಾಗಿದ್ದರು. ಆದರೆ ಪ್ಲೇನ್‌ನಲ್ಲಿ ಓರ್ವ ವ್ಯಕ್ತಿ ಮಾತ್ರ ಬದುಕಿ ಉಳಿದಿದ್ದ. ಆತನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇವನಿಗಿಂತಲೂ ಅದೃಷ್ಟವಂತೆ ಅಂದ್ರೆ, ಭೂಮಿ ಚೌಹಾಣ್. ಹೌದು.. ಈ ಹುಡುಗಿ ವಿಮಾನ ನಿಲ್ದಾಣಕ್ಕೆ ಬರಲು 10 ನಿಮಿಷ ತಡವಾಯಿತಂತೆ. ಹಾಗಾಗಿ ಫ್ಲೈಟ್ ಮಿಸ್ ಆಗಿದೆ. ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ವಿಮಾನದಲ್ಲೇ ಆಕೆ ಪ್ರಯಾಣಿಸಬೇಕಿತ್ತು. ಅದೃಷ್ವಶಾತ್ ಭೂಮಿ ಫ್ಲೈಟ್ ಮಿಸ್ ಆಗಿ ಬದುಕುಳಿದಿದ್ದಾಳೆ.

10 ನಿಮಿಷ ತಡವಾಗಿದ್ದಕ್ಕೆ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಆದರೆ ಫ್ಲೈಟ್ ಮಿಸ್ ಆಯಿತೆಂದು ಭೂಮಿ ಬೇಸರವಾಗಿ, ಕಣ್ಣೀರು ಹಾಕಿದ್ದಳು. ಆದರೆ ಬಳಿಕ ಪ್ಲೇನ್ ಕ್ರ್ಯಾಶ್ ಆದ ಸುದ್ದಿ ಕೇಳಿ, ಆಗೋದೆಲ್ಲಾ ಒಳ್ಳೆದಕ್ಕೆ ಅಂತಾ ಭೂಮಿ ಭಾವುಕರಾಗಿದ್ದಾರೆ. ನಾನು ನಂಬುವ ಗಣಪತಿ ಬಪ್ಪನೇ ನನ್ನನ್ನು ಕಾಪಾಡಿದ್ದಾನೆ ಎಂದು ಭೂಮಿ ಹೇಳಿದ್ದಾರೆ.

ಭೂಮಿಯ ಪತಿ ಲಂಡನ್‌ನಲ್ಲಿ ಇರುವ ಕಾರಣಕ್ಕೆ ಆಕೆ ಲಂಡನ್‌ಗೆ ಹೋಗಬೇಕಿತ್ತು. ಹಾಗಾಗಿ ಆ ವಿಮಾನ ಏರಲು ಭೂಮಿ ಸಿದ್ಧರಾಗಿದ್ದರು. ಆದರೆ ಅದಾಗಲಿಲ್ಲ. ವಿಮಾನ ಮಿಸ್ ಆಯಿತು ಎಂದು ಬೇಸರಿಸಿಕ“ಳ್ಳುವಾಗಲೇ, ಅಹಮದಾಬಾದ್‌ನಲ್ಲೇ ವಿಮಾನ ಪತವಾಗಿರುವ ಸುದ್ದಿ ಕೇಳಿದ ಭೂಮಿ ನಿಂತ ಜಾಗದಲ್ಲೇ ಕುಸಿದಿದ್ದಾರೆ. ಕೈ ಕಾಲೆಲ್ಲ ನಡುಕ ಶುರುವಾಗಿದೆ. ಶಾಕ್‌ ಒಳಗಾಗಿದ್ದೆ ಎಂದು ಭೂಮಿ ತಮ್ಮ ಅನುಭವ ಹೇಳಿಕ“ಂಡಿದ್ದಾರೆ.

ಒಟಾರೆಯಾಗಿ, ಆಗೋದೆಲ್ಲಾ ಒಳ್ಳೆದಕ್ಕೇ ಅಂತಾ ನಮ್ಮ ಹಿರಿಯರು ಆಗಾಗ ಹೇಳುತ್ತಿರುತ್ತಾರೆ. ಆ ಮಾತು ಭೂಮಿ ಜೀವನದಲ್ಲಿ ಸತ್ಯವಾಗಿದೆ. ದೇವರ ಮೇಲೆ ನಂಬಿಕೆ ಇರಿಸಿ, ಮುಂದೆ ಸಾಗುವುದಷ್ಟೇ ನಮ್ಮ ಕೆಲಸ.

- Advertisement -

Latest Posts

Don't Miss