Sunday, June 22, 2025

Latest Posts

ಹೆಚ್.ಡಿ.ಕೋಟೆಯ ಕೆ.ಎಂ. ಕೃಷ್ಣನಾಯಕ ನಾಳೆ JDS ಸೇರ್ಪಡೆ!

- Advertisement -

ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಪ್ರಬಲ ನಾಯಕರೊಬ್ಬರು ತೆನೆ ಹೊರಲು ಸಿದ್ಧರಾಗಿದ್ದಾರೆ. ನಾಳೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರುತ್ತಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ಕೃಷ್ಣ ನಾಯಕ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯುತ್ತಿದೆ.

ಕೆ.ಎಂ. ಕೃಷ್ಣನಾಯಕ್ 2023ರ ವಿಧಾನಸಭೆ ಚುನಾವಣೆಯಲ್ಲಿ ಹೆಗ್ಗಡದೇವನಕೋಟೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರು. ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ಕೊಟ್ಟಿದ್ರು. ಅನಿಲ್ ಚಿಕ್ಕಮಾದು 84,359 ಮತಗಳನ್ನು ಪಡೆದಿದ್ರೆ, ಕೆ.ಎಂ. ಕೃಷ್ಣನಾಯಕ್ 49,420, ಜೆಡಿಎಸ್ನ​​ ಜಯಪ್ರಕಾಶ್ ಚಿಕ್ಕಣ್ಣ 43,519 ಮತಗಳನ್ನು ಪಡೆದಿದ್ರು.

ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಕೆ.ಎಂ. ಕೃಷ್ಣ ನಾಯಕ್, ಬಳಿಕ ಬಿಜೆಪಿ ಸೇರಿದ್ರು. ಆದ್ರೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆ.ಎಂ. ಕೃಷ್ಣನಾಯಕ್ ಜೆಡಿಎಸ್ ಸೇರುತ್ತಿದ್ದಾರೆ. ಜೊತೆಗೆ ಹಲವು ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರೂ ತೆನೆ ಹೊರಲಿದ್ದು, ಜೆಡಿಎಸ್​​ ಬಲ ಹೆಚ್ಚಲಿದೆ.

2028ರ ವೇಳೆಗೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲಗೊಳಿಸಲು ಹೆಚ್​ಡಿಕೆ ಶತಪ್ರಯತ್ನ ಮಾಡ್ತಿದ್ದಾರೆ. ಹೀಗಾಗಿ ಪಕ್ಷಕ್ಕೆ ಕೃಷ್ಣ ನಾಯಕ್ ಕರೆತರಲು, ಹೆಚ್.ಡಿ.ಕೋಟೆ ಕ್ಷೇತ್ರದಲ್ಲಿ ಹಲವು ಸಭೆಗಳನ್ನೂ ಮಾಡಿದ್ರು. ಕಳೆದ ಬಾರಿ ಕಾಂಗ್ರೆಸ್ ಪಡೆದಿದ್ದು 49,420 ಮತಗಳು. ಕೃಷ್ಣನಾಯಕ್​ ಅವ್ರನ್ನ ಜೆಡಿಎಸ್​​ಗೆ ಕರೆತಂದ್ರೆ, ಜೆಡಿಎಸ್​​+ಬಿಜೆಪಿ ಒಟ್ಟು ಮತಗಳ ಸಂಖ್ಯೆ 92,939 ಆಗಲಿದೆ. ಜೆಡಿಎಸ್​​ ಗೆಲುವು ಸರಾಗವಾಗಲಿದೆ.

- Advertisement -

Latest Posts

Don't Miss