ಕಲಬುರ್ಗಿ ಕಂಸ”ನಿಗೆ ಈಗ ಕನಸು ಮನಸಿನಲ್ಲೂ ಆರ್ ಎಸ್ ಎಸ್: ಶಾಸಕ ಸುನೀಲ್ ಕುಮಾರ್

Political News: ಕಲಬುರಗಿಯಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕಾಗಿ ಹಾಕಿದ್ದ ಬ್ಯಾನರ್, ಧ್ವಜ ತೆರವು ಮಾಡಿದ್ದಕ್ಕೆ, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಸುನೀಲ್ ಕುಮಾರ್ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಲಬುರ್ಗಿ ಕಂಸ”ನಿಗೆ ಈಗ ಕನಸು ಮನಸಿನಲ್ಲೂ ಆರ್ ಎಸ್ ಎಸ್. ಸಂಘದ ಶತಮಾನೋತ್ಸವ ಸಂಭ್ರಮ ಈ ಮಹಾಶಯನಿಗೆ ಸಂಕಟವನ್ನುಂಟು ಮಾಡಿದೆ. ಕಳೆದೊಂದು ವಾರದಿಂದ ನಿದ್ದೆ ಬಿಟ್ಟು ಆರ್ ಎಸ್ ಎಸ್ ವಿರುದ್ಧ ಏನೆಲ್ಲ‌ ಮಸಲತ್ತು ಮಾಡಲು ಸಾಧ್ಯ ಎಂದು ಯೋಚಿಸುತ್ತಿರುವ ಈ ಆಧುನಿಕ ಔರಂಗಜೇಬ್ ಈಗ ಭಗವಾಧ್ವಜದ ಮೇಲೆ ಕಣ್ಣಿಟ್ಟಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಭಗವಾಧ್ವಜಕ್ಕೆ ಕೈ ಹಾಕಿದ ಔರಂಗಜೇಬ್ ನನ್ನೇ ಮಣಿಸಿದ್ದೇವೆ. ಪ್ರತಿಯೊಬ್ಬ ಜಾಗೃತ‌ ಹಿಂದುವೂ ಶಿವಾಜಿಯಾಗಬಲ್ಲ ನೆನಪಿಡಿ ಎಂದು ಸುನೀಲ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್‌ನಲ್ಲಿ ಬರೆದಿದ್ದಾರೆ.

About The Author