Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ.
ಈ ಬಗ್ಗೆ ಮಾತು ಮುಂದುವರಿಸಿದ ಅವರು, ಪ್ರತೀ ವರ್ಷ ನನ್ನ ಜನ್ಮ ದಿನದಂದು ಜನ ನನ್ನ ಮನೆ ಬಳಿ ಬಂದು ಶುಭಾಶಯ ತಿಳಿಸುತ್ತಾರೆ. ಅಷ್ಟು ಪ್ರೀತಿ ಪಡೆಯೋಕ್ಕೆ ನಾನು ಪುಣ್ಯ ಮಾಡಿದ್ದೇನೆ ಅಂತಾರೆ ಸಚ್ಚಿದಾನಂದ.
ಅಲ್ಲದೇ, ಸಚ್ಚಿದಾನಂದ ಅವರನ್ನು ಅವರ ಬೆಂಬಲಿಗರು ಮುಂದಿನ ಎಂಎಲ್ಎಂ ಎಂದು ಕರೆಯುತ್ತಾರೆ. ಇದಕ್ಕೆ ಏನಂತೀರಿ ಅಂತಾ ಕೇಳಿದ್ದಕ್ಕೆ ಉತ್ತರಿಸಿದ ಸಚ್ಚಿದಾನಂದ, ನಮ್ಮೂರ ಚುನಾವಣೆಯಲ್ಲಿ ನಾನು ಸೋತಿದ್ದೇನೆ ವಿನಃ, ನಾನು ನಮ್ಮ ಜನರ ಪ್ರೀತಿಯಲ್ಲಿ ಸೋತಿಲ್ಲ ಎಂದಿದ್ದಾರೆ. ಅಲ್ಲದೇ ನನಗೆ ಹಲವರು ಮುಂದಿನ ಚುನಾವಣೆಗೆ ನಿಲ್ಲಿ, ನಿಮ್ಮನ್ನು ನಾವು ಬೆಂಬಲಿಸುತ್ತೇವೆ ಎಂದು ಪ್ರೀತಿಯಿಂದ ಹೇಳುತ್ತಾರೆ ಎಂದು ಸಚ್ಚಿದಾನಂದ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




