ವೀರ ಸಾರ್ವಕರ್​ ಮೇಲ್ಸೇತುವೆ ಲೋಕಾರ್ಪಣೆ

ಬೆಂಗಳೂರು: ಯಲಹಂಕ ಉಪನಗರದ ‌ಸಂದೀಪ್​ ಉನ್ನಿಕೃಷ್ಣನ್​ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಮೇಲ್ಸೆತುವೆಯನ್ನು ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದು, ಅದಕ್ಕೆ ವೀರ ಸಾವರ್ಕರ್ ಮೇಲ್ಸೇತುವೆ ಎಂದು ನಾಮಕರಣ ಮಾಡಿದ್ದಾರೆ.

34 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರೋ ಈ ಮೇಲ್ಸೇತುವೆ 400 ಮೀಟರ್​ ಉದ್ದ, 17 ಮೀಟರ್​ ಅಗಲದ 4 ಪಥವಿದೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್​ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸಾಕಷ್ಟು ವಿವಾದದ ನಡುವೆಯೂ ಫ್ಲೈಓವರ್ ಗೆ ಸಾವರ್ಕರ್ ಹೆಸರು ನಾಮಕರಣ ಮಾಡಲಾಗಿದೆ.

ಉದ್ಘಾಟನೆ ನಂತರ ಸ್ಥಳೀಯ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್​ ಮಾತನಾಡಿ, ಸ್ವಾತಂತ್ರ್ಯ ವೀರನ ಬಗ್ಗೆ 3 ಸಾವಿರ ಪುಸ್ತಕಗಳ ಬಿಡುಗಡೆ ಮಾಡ್ತಿದ್ದೇವೆ. ಸಾವರ್ಕರ್​ ಬಗ್ಗೆ ಬಹಳಷ್ಟು ಮಂದಿ ವಿರೋಧ ಮಾಡಿದ್ದಾರೆ, ಬಹುಶಃ ವಿರೋಧ ಮಾಡಿದವರಿಗೆ ಸಾವರ್ಕರ್ ಇತಿಹಾಸದ ಅರಿವಿಲ್ಲ ಎಂದು ಕಿಡಿಕಾರಿದ್ರು.

ಸಿಎಂ ಬಿ‌‌.ಎಸ್ ಯಡಿಯೂರಪ್ಪ ಮಾತನಾಡಿ ಸ್ವಾತಂತ್ರ್ಯಸೇನಾನಿ ವೀರ ಸಾವರ್ಕರ್ ನಾಮಕರಣದಲ್ಲಿ ಉದ್ಘಾಟನೆ ಮಾಡಿದ್ದೇನೆ. ನಗರೋತ್ಥಾನ ಅನುದಾನದಡಿ ನಿರ್ಮಾಣಗೊಂಡಿರೋ ಈ ಸೇತುವೆಗೆ ಮಹಾನ್ ದೇಶಭಕ್ತನ ಹೆಸರು ಇಟ್ಟಿರುವುದು ಸೂಕ್ತವಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ 7300 ಕೋಟಿ ಒದಗಿಸಲಾಗಿದೆ, ಯಲಹಂಕ ವಿಧಾನಸಭಾ ಕ್ಷೇತ್ರಕ್ಕೆ 400 ಕೋಟಿ ಅನುದಾನ ಮೀಸಲಿಡಲಾಗಿದೆ. ವೀರ ಸಾವರ್ಕರ್​ ಸೇತುವೆ ನಿರ್ಮಾಣವಾಗಿರೋದು ನಮಗೆಲ್ಲಾ ಸ್ಫೂರ್ತಿ ತರುವಂತದ್ದು ಎಂದರು.

Karnataka TV Contact

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್, ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಾಗೇಂದ್ರ ಆರೂಡಿ, ಕರ್ನಾಟಕ ಟಿವಿ ಬೆಂಗಳೂರು.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278

About The Author