Friday, June 20, 2025

Latest Posts

ಕೆ.ಎಸ್.ಈಶ್ವರಪ್ಪ ಅವರಿಗೆ ಸೂಕ್ತಸ್ಥಾನಮಾನ ಕೊಡಿ

- Advertisement -

www.karnatakatv.net : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ವಿವಿಧ ಮಠಗಳ ಸ್ವಾಮೀಜಿಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಮಖಣಾಪೂರ ಗುರುಪೀಠದ ಸೋಮಲಿಂಗೇಶ್ವರ ಮಹಾಸ್ವಾಮೀಜಿ, ರೇವಣಸಿದ್ದೇಶ್ವರ ಗುರುಪೀಠದ ಶಾಂತಮಯ ರೇವಣಸಿದ್ದೇಶ್ವರ ಮಹಾಸ್ವಾಮೀಜಿ, ಅಥಣಿಯ ಸಿದ್ಧ ಸಿರಿ ಸಿದ್ಧಾಶ್ರಮ ಕೌಲಗುಡ್ಡ ಹಣಮಾಪೂರ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹಾಗೂ ಗಣಿ ಆಶ್ರಮದ ಚಿನ್ಮಯಾನಂದ ಮಹಾಸ್ವಾಮೀಜಿ ಅವರು ಮಾತನಾಡಿ, ಬಿಜೆಪಿಯ ಕೇಂದ್ರ ನಾಯಕರು ಈಶ್ವರಪ್ಪ ಅವರಿಗೆ ಸಂಪುಟ ರಚನೆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ರಾಜ್ಯ ಸರ್ಕಾರ ರಚನೆಗೆ ಹಲವರು ಕಾರಣರಾಗಿದ್ದಾರೆ. ಅದು ನಿಜ. ಆದರೆ, ಈಶ್ವರಪ್ಪ ಅವರನ್ನು ಕಡೆಗಣಿಸದೆ ಸೂಕ್ತ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಈಶ್ವರಪ್ಪ ಅವರು ಉಪಮುಖ್ಯಮಂತ್ರಿ ಸ್ಥಾನವನ್ನು ಕೇಳಿ ಪಡೆಯಬಾರದು. ಬಿಜೆಪಿಗಾಗಿ ಈಶ್ವರಪ್ಪ ಅವರು ಇದುವರೆಗೂ ದುಡಿದಿದ್ದಾರೆ. ಅದರ ಫಲವಾಗಿ ಈ ಸ್ಥಾನ ದೊರೆಯಬೇಕು ಎಂದರು. ನಾವೆಲ್ಲರೂ ಉತ್ತರ ಕರ್ನಾಟಕದ ಸ್ವಾಮೀಜಿಗಳು, ಎಲ್ಲರೂ ಒಟ್ಟಾಗಿ ಬಂದು ಕೆ.ಎಸ್.ಈಶ್ವರಪ್ಪ ಅವರಿಗೆ ಸೂಕ್ತಸ್ಥಾನಮಾನ ಕೊಡಿ ಎಂದು ಕೇಳುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಈಶ್ವರಪ್ಪ ಅವರೂ ಪಕ್ಷ ಕಟ್ಟಿದ್ದಾರೆ. ಅವರಿಗೆ ಅನ್ಯಾಯವಾಗಬಾರದು ಎಂದು ಹೇಳಿದರು.

- Advertisement -

Latest Posts

Don't Miss