Tuesday, June 3, 2025

Latest Posts

ರಾಜಕಾರಣಕ್ಕೆ ಸ್ವಾಮೀಜಿಗಳು ಹಸ್ತಕ್ಷೇಪ ಮಾಡುವುದು ಕರ್ನಾಟಕದ ಚರಿತ್ರೆಯಲ್ಲಿ ಕಪ್ಪುಚುಕ್ಕೆ

- Advertisement -

www.karnatakatv.net : ಚಾಮರಾಜನಗರ: ರಾಜಕಾರಣಕ್ಕೆ ಸ್ವಾಮೀಜಿಗಳು ಹಸ್ತಕ್ಷೇಪ ಮಾಡುವುದು ಕರ್ನಾಟಕದ ಚರಿತ್ರೆಯಲ್ಲಿ ಕಪ್ಪುಚುಕ್ಕೆ ಎಂದು  ಚಾಮರಾಜನಗರದಲ್ಲಿ ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.

ಸ್ವಾಮೀಜಿಗಳಾದವರು ವಿನಯ-ವಿವೇಕ, ಆಚಾರ-ವಿಚಾರ, ಸನ್ಮಾರ್ಗಗಳನ್ನು ಭೋಧಿಸಬೇಕು , ರಾಜಕೀಯದಲ್ಲಿ ಸಮಸ್ಯೆ ಬಂದಾಗ ಖಾವಿಧಾರಿಗಳಾಗಿ ಒಂದು ಜಾತಿಗೆ, ಪಕ್ಷಕ್ಕೆ ಸೀಮಿತವಾಗಿ ವರ್ತಿಸುವುದು ಅವರು ತೊಡುವ ಖಾವಿಗೆ ಅವಮಾನವಾದಂತೆ ಎಂದು ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.

ಖಾವಿದಾರಿಗಳ ನಡೆ ಮಾನವೀತೆ ಕಡೆಯಿಲ್ಲ ಎಂದು ಜನರಿಗೆ ಗೊತ್ತಾಗುತ್ತಿದೆ, ಇದು ಬಸವನ ನಾಡಲ್ಲಿ ದುಃಖಕರ ವಿಚಾರ,  ಒಂದೊಂದು ಪಕ್ಷ ಅಧಿಕಾರಕ್ಕೆ ಬಂದಾಗ ಹೆಸರು ಬದಲಿಸುವುದು ದ್ವೇಷದ ರಾಜಕಾರಣ ಆಗಲಿದೆ,  ದ್ವೇಷ ಹಚ್ಚಿದಾಗ ಪ್ರೀತಿ ಬರಲಾಗಲ್ಲ. ಪ್ರೀತಿ ಮತ್ತು ಸಹನೆಯಿಂದ ಪ್ರಜಾಪ್ರಭುತ್ವದಲ್ಲಿ ಬದುಕಬೇಕಿದೆ ಎಂದರು.

ಹೆಸರುಗಳನ್ನು ಬದಲಿಸುತ್ತಾ ಹೋಗುವುದು ವೈಯಕ್ತಿಕ ಪ್ರತಿಷ್ಠೆಗೆ ಕಾರಣ,  ಎನ್.ಮಹೇಶ್ ಒಂದು ಪಕ್ಷಕ್ಕೆ ಹೋಗುವುದು ಸಂವಿಧಾನ ಕೊಟ್ಟಿರುವ ಹಕ್ಕು ಮತ್ತು ಅದು ಅವರ ವೈಯಕ್ತಿಕ ವಿಚಾರವಾಗಿದ್ದು, ರಾಜಕೀಯ  ಅಸ್ತಿತ್ವ ಕಂಡುಕೊಳ್ಳಲು ಒಂದು ಪಕ್ಷಕ್ಕೆ ಸೇರಿರಬಹುದು ಎಂದು ಹೇಳಿದ ಸ್ವಾಮೀಜಿಗಳು ನಂಬಿದ ಸಿದ್ಧಾಂತ ಮತ್ತು ಅವರು ಮಾಡಿದ ಚಳವಳಿ ಯಾವತ್ತೂ ಸಾಯುವುದಿಲ್ಲ ಎಂದರು. ಚಳವಳಿಗೆ ವ್ಯಕ್ತಿ ಮುಖ್ಯವಲ್ಲ, ಯಾರೂ ಗೊಂದಲಕ್ಕೀಡಾಗುವುದು ಬೇಡ ಎಂದು ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.

- Advertisement -

Latest Posts

Don't Miss