Sunday, June 22, 2025

Latest Posts

‘ನಮ್ ಹತ್ರ ಯಾರೂ ವೋಟ್ ಕೇಳೋಕೆ ಬರ್ಬೇಡಿ’

- Advertisement -

www.karnatakatv.net : ಹುಬ್ಬಳ್ಳಿ: ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಬೇಸತ್ತ ಹುಬ್ಬಳ್ಳಿ ನಗರದ ಬಡಾವಣೆಯೊಂದರ ಜನ ಈ ಬಾರಿ ಚುನಾವಣೆಯನ್ನೇ ಬಹಿಷ್ಕಾರ ಮಾಡೋ ನಿರ್ಧಾರ ಮಾಡಿದ್ದಾರೆ.

ಇಲ್ಲಿನ  ಭೈರಿದೇವರಕೊಪ್ಪದ ರಾಜಧಾನಿ ಕಾಲೊನಿ ನಿವಾಸಿಗಳು ಚುನಾವಣಾ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.  ಸುಮಾರು 500ಕ್ಕೂ ಹೆಚ್ಚು ಜನ ವಾಸವಿದ್ದು ಇವರ ಪೈಕಿ 287 ಮತದಾರರಿದ್ದಾರೆ. ಕಳೆದ 22ವರ್ಷಗಳಿಂದ ರಸ್ತೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ  ಹಲವಾರು ಬಾರಿ ಜನಪ್ರತಿನಿಧಿಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಕೊನೆಗೆ ಡಿಸಿ ಬಳಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ  ನಮ್ಮ ಬಳಿ ಯಾವ ಪಕ್ಷದವರೂ ಬರೋದು ಬೇಡ ಅಂತ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ನಗರದ ಪ್ರತಿ ಮನೆಯ ಗೇಟ್‌ಗೆ ಮತದಾನ ಬಹಿಷ್ಕಾರ ಮಾಡಲಾಗಿದೆ. ಯಾರು ಮತ ಕೇಳಲು ಬರಬೇಡಿ- ಅಂತಾ ಸೂಚನಾಫಲಕ ಹಾಕಿದ್ದಾರೆ.

ಮುಖ್ಯ ರಸ್ತೆಯಿಂದ ನಗರಕ್ಕೆ ಸಂಪರ್ಕ ಕಲ್ಪಿಸೋ ಒಂದು ಸಣ್ಣ ಮಣ್ಣಿನ ರಸ್ತೆಯಿದ್ದು ಇಲ್ಲಿನ ನಿವಾಸಿಗಳು ಅದೇ ರಸ್ತೆಯಲ್ಲಿ  ಓಡಾಬೇಕು. ಅಲ್ಲದೆ ಈ ರಸ್ತೆಯಲ್ಲಿ ಬೀದಿ ದೀಪಗಳು ಉರಿಯುವುದಿಲ್ಲ. ರಾತ್ರಿ ವೇಳೆ ಇಲ್ಲಿ ಮಹಿಳೆಯರು, ಮಕ್ಕಳು ಇಲ್ಲಿ ಓಡಾಡುವಂತೆಯೇ ಇಲ್ಲ. ಕೆಲವೊಮ್ಮೆ ಸಂಜೆ ವೇಳೆ ಮಹಿಳೆಯರನ್ನು ಚುಡಾಯಿಸಿದ ಪ್ರಕರಣಗಲೂ ದಾಖಲಾಗಿವೆ ಅನ್ನೋದು ಇಲ್ಲಿನ ನಿವಾಸಿಗಳ ಅಳಲು. ಇನ್ನು ಮಳೆ ಬಂದರೆ ಮಣ್ಣಿನ ರಸ್ತೆ ಕೆಸರುಗುಂಡಿಯಾಗಿ ವಾಹನ ಸವಾರರು ಪರದಾಡುವಂತಾಗುತ್ತೆ. ಈ ಎಲ್ಲದರಿಂದ ಬೇಸತ್ತಿರೋ ಈ ಬಡಾವಣೆಯ ಜನ ಯಾರಿಗೆ ವೋಟ್ ಹಾಕಿದ್ರೇನಂತೆ ನಮ್ಮ ಸಮಸ್ಯೆ ಮಾತ್ರ ಹಾಗೆ ಇದೆ ಅಂತ ಈ ಬಾರಿ ಚುನಾವಣೆಯನ್ನೇ ಬಹಿಷ್ಕರಿಸೋ ನಿರ್ಧಾರಕ್ಕೆ ಬಂದಿದ್ದಾರೆ.

ಕರ್ನಾಟಕ ಟಿವಿ – ಹುಬ್ಬಳ್ಳಿ

- Advertisement -

Latest Posts

Don't Miss