www.karnatakatv.net: ಲಕ್ಷ್ಮೇಶ್ವರ: ರೈತನ ಜಮೀನಿನಲ್ಲಿ ಏಕಾಏಕಿ ದೇವರು ಮೂರ್ತಿಗಳು ಉದ್ಭವವಾಗಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರ ಸರಹದ್ದಿಗೆ ಹೊಂದಿಕೊಂಡಿರುವ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆದಿದೆ.
ಉಡಚಪ್ಪ, ಮಂಜವ್ವ ಅವರಿಗೆ ಈ ಜಮೀನು ಸೇರಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ದೌಡಾಯಿಸುತ್ತಿದ್ದಾರೆ. ಅಲ್ಲದೇ ಒಂದು ವಾರದಿಂದ ಮನೆ ಬಿಟ್ಟು ಜಮೀನಿನಲ್ಲಿ ದಂಪತಿಗಳು ಬೀಡುಬಿಟ್ಟಿದ್ದು, ನನ್ನ ಕನಸಿನಲ್ಲಿ ಬಂದು ಬಿಕ್ಷೆ ಬೇಡಬೇಕು ನಿಮ್ಮ ಹೊಲದಲ್ಲಿ ನಾನಿದ್ದೆನೆ ಎಂದು ದೈವಶಕ್ತಿ ಹೇಳುತ್ತಾಳೆ ಎನ್ನುತ್ತಿದ್ದಾಳೆ ಮಂಜವ್ವ. ಇನ್ನೂ ಈ ಮಾತು ಕೇಳಿ ಉಡಚಪ್ಪ ಪತ್ನಿ ಮಂಜವ್ವ ಹಾಗೂ ಇಬ್ಬರು ಮಕ್ಕಳು ಬಿಕ್ಷೆ ಬೇಡಲು ಹೊರಟಿದ್ದಾರೆ. ಸುದ್ದಿ ಕೇಳಿ ಭಕ್ತರು ಹೂ , ಹಣ್ಣು, ಕಾಯಿ ತಂದು ಪೂಜೆ ಮಾಡುತ್ತಿದ್ದಾರೆ. ಒಂದಡೆ ಈ ಗ್ರಾಮದ ಕೆಲವರಿಂದ ಅನುಮಾನದ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದಡೆ ದೇವರ ಬಗ್ಗೆ ಧಾರ್ಮಿಕ ಭಾವನೆ ಹೊಂದಿರುವ ಮುಗ್ಧ ಜನತೆ ತಮ್ಮ ಭಕ್ತಿಯ ಪರಾಕಾಷ್ಠೆ ತೊರಿಸುತ್ತಿದ್ದಾರೆ.
ಒಟ್ಟಿನಲ್ಲಿ ಇದು ಜನ ಮರಳೋ, ಜಾತ್ರೆ ಮರಳೋ ಎಂಬುವಂತಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸತ್ಯಾಸತ್ಯತೆ ಪರಾಮರ್ಶಿಸಬೇಕಾಗಿದೆ.
ಕರ್ನಾಟಕ ಟಿವಿ- ಹುಬ್ಬಳ್ಳಿ