ಜಿಲ್ಲಾಮಟ್ಟದ ಇಲಾಖೆಗಳಿಂದ ಕಾರಾಗೃಹದ ಅಭಿವೃದ್ದಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಿ ಕಾರಾಗೃಹದ ಅಭಿವೃದ್ದಿಗೆ ಅಧಿಕಾರಿಗಳು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ಅವರು ತಿಳಿಸಿದರು.ಕಾರಾಗೃಹದ ಅಭಿವೃದ್ದಿಗೆ ಸಹಕರಿಸಿ: ಎಸ್.ಅಶ್ವತಿ
ನಗರದ ಜಿಲ್ಲಾ ಕಾರಾಗೃಹದಲ್ಲಿ ಕಾರಾಗೃಹ ಅಭಿವೃದ್ದಿ ಹಾಗೂ ಸುಗಮ ಆಡಳಿತಕ್ಕೆ ಸಂಭಂದಿಸಿದಂತೆ ಏರ್ಪಡಿಸಲಾಗಿದ್ದ ಜಿಲ್ಲಾ ಕಾರಾಗೃಹ ಸಂದರ್ಶಕರ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರಾಗೃಹದ ಹೊರಗೋಡೆ, ಕಚೇರಿ ಹಾಗೂ ಇನ್ನಿತರ ಪ್ರದೇಶಗಳ ರಿಪೇರಿ, ಕಾರಾಗೃಹ ಆವರಣದಲ್ಲಿರುವ ಬೋರ್ ವೆಲ್ ಗಳ ರೀಚಾರ್ಜ್, ಹೈ ಮಾಸ್ಕ್ ಲೈಟ್ ಅಳವಡಿಕೆ ಕಾರಾಗೃಹದ ಸುತ್ತ ಇರುವ ಭೂಮಿಯಲ್ಲಿ ಕೃಷಿ ಚಟುವಟಿಕೆ ಕುರಿತಂತೆ ಚರ್ಚೆ ನಡೆಸಿದರು.
ಜಿಲ್ಲಾಧಿಕಾರಿಗಳು ಅಡುಗೆಮನೆ, ಅನಕ್ಷರಸ್ಥ ಬಂದಿಗಳ ಕಲಿಕಾ ಕೇಂದ್ರ, ಬಂದಿಗಳ ವೃತ್ತಿಪರ ತರಬೇತಿ ಕೇಂದ್ರ, ಗ್ರಂಥಾಲಯ, ಆಸ್ಪತ್ರೆ, ಬಂದಿಗಳ ಸೆಲ್ ಮತ್ತು ಬ್ಯಾಂಕುಗಳಿಗೆ ಭೇಟಿ ನೀಡಿ ಭದ್ರತೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿ ಆಡಳಿತ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ವರಿಷ್ಠಾಧಿಕಾರಿಗಳಾದ ಎನ್.ಯತೀಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎ.ಎಂ ನಳಿನಿಕುಮಾರಿ, ಜಿಲ್ಲಾಕಾರಾಗೃಹ ಅಧೀಕ್ಷಕರಾದ ಟಿ. ಕೆ. ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಧುಸೂದನ್, ಕರ್ನಾಟಕ ಟಿವಿ, ಮಂಡ್ಯ




