Tuesday, June 24, 2025

Latest Posts

BREAKING NEWS: ವಂಚನೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಿರ್ಮಾಪಕ ಸೇರಿ ನಾಲ್ವರ ಬಂಧನ

- Advertisement -

ಬೆಂಗಳೂರು: ಲೇಔಟ್ ಮಾಡಲಾಗಿದೆ, ಸೈಟಿ ಖಾಲಿ ಇದೆ. ನೋಡಿ ಎಂಬುದಾಗಿ ಕರೆದುಕೊಂಡು ಹೋಗಿ ತೋರಿಸಿ ಹಣ ಪಡೆದು, ವಂಚನೆ ನಡೆಸುತ್ತಿದ್ದಂತ ಆರೋಪದ ಮೇಲೆ, ಸ್ಯಾಂಡಲ್ ವುಡ್ ನಿರ್ಮಾಪಕ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಗೆ ನಟ ಕೋಮಲ್ ಅಭಿನಯದ ಲೊಡ್ಡೆ ಸಿನಿಮಾ ನಿರ್ಮಾಪಕ ಮಂಜುನಾಥ್ ಸಹಿತ ನಾಲ್ವರ ವಿರುದ್ಧ ಪುಷ್ಟಕುಮಾರ್ ಎಂಬುವರು ವಂಚನೆ ಸಂಬಂಧ ದೂರು ದಾಖಲಿಸಿದ್ದರು.

ಈ ದೂರಿನಲ್ಲಿ ಸೈಟ್ ಕೊಡಿಸೋದಾಗಿ ಹೇಳಿ, ಹಣ ಪಡೆದು ಇದುವರೆಗೆ ಕೊಡದೇ, ವಂಚಿಸುತ್ತಿದ್ದಾರೆ ಎಂಬುದಾಗಿ ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ರಾಜಾಜಿನಗರ ಠಾಣೆಯ ಪೊಲೀಸರು ಲೊಡ್ಡೆ ಸಿನಿಮಾ ನಿರ್ಮಾಪಕ ಮಂಜುನಾಥ್, ಶಿವಕುಮಾರ್, ಗೋಪಾಲ ಹಾಗೂ ಚಂದ್ರಶೇಖರ್ ಎಂಬುವರನ್ನು ಬಂಧಿಸಿದ್ದಾರೆ.

ಅಂದಹಾಗೇ ನಿರ್ಮಾಪಕ ಮಂಜುನಾಥ್, ಲೊಡ್ಡೆ ಸಿನಿಮಾವನ್ನು ಸಾಕಷ್ಟು ಹಣ ಹೂಡಿಕೆ ಮಾಡಿ ನಿರ್ಮಿಸಿದ್ದರು. ಆದ್ರೇ, ಸಿನಿಮಾ ಹಿಟ್ ಆಗದ ಕಾರಣ, ನಷ್ಟ ಅನುಭವಿಸಿದ್ದರು. ಈ ಬಳಿಕ ರಾಜಾಜಿನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಇಳಿದಿದ್ದ ಅವರು, ಕಚೇರಿ ಕೂಡ ತೆರೆದಿದ್ದರು. ಆದ್ರೇ.. ಸೈಟ್ ಕೊಡಿಸೋದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಪುಷ್ಟಕುಮಾರ್ ನೀಡಿದ್ದಂತ ದೂರಿನ ಹಿನ್ನಲೆಯಲ್ಲಿ, ಈಗ ಬಂಧನಕ್ಕೊಳಗಾಗಿದ್ದಾರೆ.

- Advertisement -

Latest Posts

Don't Miss