Friday, June 20, 2025

Latest Posts

ಹಿಂದು ಕ್ರೈಸ್ತ ಮುಸಲ್ಮಾನ, ಇದು ಆರ್.ಎಸ್.ಎಸ್ ಅವರಿಗೆ ಹಿಡಿಸೋದಿಲ್ಲಾ – ವಾಟಾಳ್ ನಾಗರಾಜ್ ವಾಗ್ದಾಳಿ.

- Advertisement -

 

ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಯ ಹೋರಾಟಗಾರ ವಾಟಾಳ್ ನಾಗರಾಜ್ ಆರ್.ಎಸ್.ಎಸ್ ಹಾಗೂ ಬಿಜೆಪಿ ವಿರುದ್ದ ಗುಡುಗಿದ್ದಾರೆ.

ಪಠ್ಯ ಪುಸ್ತಕ ಯಾವಾಗಲೂ ಪ್ರಮಾಣಿಕವಾಗಿರಬೇಕು. ಗೊಂದಲಕ್ಕೆ ಅವಕಾಶ ಕೊಡಬಾರದು. ರಾಷ್ಟ್ರಕವಿ ಕುವೆಂಪು ರವರ ನಾಡಗೀತೆ ಇವತ್ತು ಆರ.ಎಸ್.ಎಸ್.ನವರಿಗೆ, ಬಿಜೆಪಿಯವರಿಗೆ ಮತ್ತು ಹಿಂದು ಸಂಘಟನೆಗಳಿಗೆ ನುಂಗಲಾರದ ತುತ್ತಾಗಿದೆ ಎಂದು ಬಿಜೆಪಿ, ಆರ್.ಎಸ್.ಎಸ್ ವಿರುದ್ದ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.

ಈ ನಾಡಗೀತೆಯಲ್ಲಿ ಹಿಂದು, ಕ್ರೈಸ್ತ, ಮುಸಲ್ಮಾನ ಇದ್ದು, ಇದು ಆರ್.ಎಸ್.ಎಸ್.ಅವರಿಗೆ ಹಿಡಿಸೋದಿಲ್ಲಾ. ಅದ್ದರಿಂದ ಅವರಿಗೆ ಎಲ್ಲೋ ಹೊಟ್ಟೆ ನೋವು ಆಗಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು. ಜೈ ಭಾರತ ಜನನಿಯ ತನುಜಾತೆ, ಈ ಸಾಹಿತ್ಯದಿಂದ ಆರಂಭವಾದ ಈ ಅದ್ಬುತವಾದ ನಾಡಗೀತೆ, ಇದಕ್ಕೆ ಅಪಚಾರ ಮಾಡುವಂತ ಪಿತೂರಿ ನಡೆಯುತ್ತಿದೆ. ಈ ನಾಡಗೀತೆಗೆ ಎಲ್ಲಾದ್ರು ಅಪಚಾರ ಆಗಿದ್ದೇ ಆದ್ರೆ, ಇಡೀ ರಾಜ್ಯಾದ್ಯಂತ ಕ್ರಾಂತಿ ಆಗುತ್ತೆ. ಸಾವಿರಾರು ಜನ ಬೀದಿಗೆ ಇಳಿಯುತ್ತಾರೆ, ಜೈಲಿಗೆ ಹೋಗಬೇಕಾಗುತ್ತೆದೆ ಎಂದು ಆರ್.ಎಸ್.ಎಸ್ ಹಾಗೂ ಬಿಜೆಪಿಗೆ ವಾಟಾಳ್ ನಾಗರಾಜ್ ಎಚ್ಚರಿಕೆಯನ್ನು ನೀಡಿದರು.

ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.

 

- Advertisement -

Latest Posts

Don't Miss