Wednesday, March 12, 2025

Latest Posts

ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಆತ್ಮಹತ್ಯೆ..!

- Advertisement -

Karnataka News:

ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿಯಾಗಿದ್ದ  ಬಸವಸಿದ್ಧಲಿಂಗ ಸ್ವಾಮೀಜಿ ಮಠದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ನಡೆದಿದೆ.

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಂಧನದ ನಂತರ ಫೋನ್  ಸಂಭಾಷಣೆಯ  ಆಡಿಯೋ ಒಂದು ವೈರಲ್  ಆಗಿತ್ತು.ಇಬ್ಬರು ಮಹಿಳೆಯರು ಫೋನ್​ನಲ್ಲಿ ಸ್ವಾಮೀಜಿಗಳ ವಿಚಾರದ ಕುರಿತು  ಸಂಭಾಷಣೆ ನಡೆಸಿದ್ದರು. ಮಾತನಾಡಿಕೊಂಡಿದ್ದ ಆಡಿಯೊ ವೈರಲ್ ಆಗಿತ್ತು. ಆ ಸಂಭಾಷಣೆಯಲ್ಲಿ ಒಬ್ಬ ಮಹಿಳೆಯು ಬಸವಸಿದ್ಧಲಿಂಗ ಸ್ವಾಮೀಜಿ ಹೆಸರನ್ನು ಮಹಿಳೆ ಉಲ್ಲೇಖಿಸಿದ್ದರು ಎನ್ನಲಾಗಿದೆ.  ಇದರಿಂದ ನೊಂದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಆತ್ಮಹತ್ಯೆಗೆ ಮೊದಲು ಡೆತ್​ನೋಟ್‌ ಬರೆದಿಟ್ಟಿರಬಹುದು ಎಂದು  ಊಹಿಸಲಾಗಿದೆ.  ವೈರಲ್ ಆಗಿರುವ ಆಡಿಯೊದಲ್ಲಿರುವ ಮಹಿಳೆಯರು ಯಾರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಟಿ.ಕೆ ಹಳ್ಳಿ ಯಂತ್ರಗಾರ ಜಲಾವೃತ: ಸ್ಥಳಕ್ಕೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ

ಮುರುಘಾ ಮಠದ ಶ್ರೀಗಳಿಗೆ 9 ದಿನ ಜೈಲುವಾಸ…!

ವಿಧಾನ ಸೌಧಕ್ಕೂ ತಪ್ಪಿಲ್ಲ ಜಲಕಂಟಕ…!

- Advertisement -

Latest Posts

Don't Miss