Friday, June 20, 2025

Latest Posts

ನಾಳೆಯಿಂದ ಕೋಲಾರದಲ್ಲಿ ಜೆಡಿಎಸ್ ನ 5 ದಿನಗಳ ಪಂಚರತ್ನ ರಥಯಾತ್ರೆ

- Advertisement -

ಕೋಲಾರ: ನಾಳೆಯಿಂದ ಕೋಲಾರದಲ್ಲಿ 5 ದಿನಗಳ ಕಾಲ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನ 1 ರಂದು ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಅದ್ದೂರಿ ಸಮಾವೇಶ ನಿರಂತರ ಮಳೆ ಕಾರಣದಿಂದ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಮುಳಬಾಗಿಲು ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಂಚರತ್ನ ರಥಯಾತ್ರೆ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಮಳೆಯಿಂದ ಎರಡು ಬಾರಿ ಕಾರ್ಯಕ್ರಮ ರದ್ದಾಗಿತ್ತು. ಈ ಹಿನ್ನೆಲೆ ಮುಂಜಾಗೃತವಾಗಿ 1 ಲಕ್ಷ ಜನ ಕಾರ್ಯಕ್ರಮಕ್ಕೆ ಸೇರುವ ನಿರೀಕ್ಷೆ ಇರುವುದರಿಂದ ಜರ್ಮನ್ ಪೆಂಡಾಲ್ ವ್ಯವಸ್ಥೆ ಮಾಡಲಾಗಿದೆ.

ಡ್ರಗ್ಸ್ ಸಾಗಾಣೆ ಮಾಡಲು ಐನಾತಿ ಪ್ಲಾನ್ ಮಾಡಿದ್ದ ಮೂವರ ಬಂಧನ

ಇನ್ನು 40 ಎಕರೆ ವಿಸ್ತರಣದಲ್ಲಿ ಬೃಹತ್ ವೇದಿಕೆಯೊಂದಿಗೆ ಜರ್ಮನ್ ಪೆಂಡಾಲ್ ಸಿದ್ದಗೊಳ್ಳುತ್ತಿದ್ದು ನಾಳೆ 12 ಗಂಟೆಗೆ ಪಂಚರತ್ನ ಬೃಹತ್ ಸಮಾವೇಶಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಚಾಲನೆ ನೀಡಲಿದ್ದಾರೆ. ಸಮಾವೇಶ ಕಾರ್ಯಕ್ರಮಕ್ಕೆ ಬರುವ ಜನರಿಗೆ ವಾಹನ ವ್ಯವಸ್ಥೆ ಮಾಡಲಾಗಿದ್ದು, 1 ಲಕ್ಷ ಮಂದಿಗೆ ಊಟದ ವ್ಯವಸ್ಥೆಯನ್ನ ಸಹ ಮಾಡಲಾಗಿದೆ, ಪಂಚರತ್ನ ಯಾತ್ರೆಯ ಬೃಹತ್ ಸಮಾವೇಶ ವೇದಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಸಹ ಬಿಡುಗಡೆ ಮಾಡುವ ಸಾಧ್ಯತೆ ಇದ್ದು ವೇದಿಕೆ ಮೇಲೆ 100 ಮಂದಿ ಅಭ್ಯರ್ಥಿಗಳಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಇವು ಮುಖ್ಯ ದ್ವಾರದ ಬಳಿ ಇದ್ದರೆ ವಿಪರೀತ ಖರ್ಚಾಗುತ್ತದೆ..!

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗದಂತೆ ಕಾರ್ಯಕ್ರಮ ಸ್ಥಳದಿಂದ 500 ಮೀ .ದೂರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಳಬಾಗಿಲು ಕ್ಷೇತ್ರ ಒಂದಕ್ಕೆ 150 ಕ್ಕೂ  ಹೆಚ್ಚು ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು,  ಸಮಾವೇಶದ ಬಳಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗೃತ ಕ್ರಮವಾಗಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ .

ಡ್ರಗ್ಸ್ ಸಾಗಾಣೆ ಮಾಡಲು ಐನಾತಿ ಪ್ಲಾನ್ ಮಾಡಿದ್ದ ಮೂವರ ಬಂಧನ

- Advertisement -

Latest Posts

Don't Miss