ಬೆಂಗಳೂರು: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ಪತ್ನಿ ಐಶ್ವರ್ಯ, ಕೃಷ್ಣೇಗೌಡ ಪತ್ನಿಯನ್ನು ಪೊಲೀಶರು ವಶಕ್ಕೆ ಪಡೆದಿದ್ದಾರೆ. ಐಶ್ವರ್ಯ ಅವರು ಚಿಲುಮೆ ಸಂಸ್ಥೆಯ ನಿರ್ದೇಶಕಿ ಆಗಿದ್ದರು. ಟಿ.ಬೇಗೂರು ತೋಟದ ಮನೆಗೆ ದಾಖಲಾತಿ ಸಾಗಿಸಿದ್ದ ಕೃಷ್ಣೇಗೌಡ ಪತ್ನಿ ಮತ್ತು ಐಶ್ವರ್ಯ ಅವರು ಈಗ ಪೊಲೀಸರ ವಶದಲ್ಲಿದ್ದಾರೆ.
ರಾಜ್ಯದ ರೈತರು ಶ್ರೀಗಂಧ ಬೆಳೆಯಲು ಇನ್ನು ನಿರ್ಬಂಧವಿಲ್ಲ: ಶ್ರೀಗಂಧ ನೀತಿಗೆ ಸಚಿವ ಸಂಪುಟ ಸಮ್ಮತಿ
ಮಾಹಿತಿ ಆಧರಿಸಿ ನಿನ್ನೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನಾಲ್ಕು ಜನ ಆರೋಪಿಗಳನ್ನು ವಶಪಡಿಸಿಕೊಂಡು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಹಲಸೂರ್ ಗೇಟ್ ಪೊಲೀಸರು ನಿನ್ನೆ ಚಿಲುಮೆ ಸಂಸ್ಥೆ ಮೇಲೆ ದಾಳಿ ನಡೆಸಿದ್ದರು. ಆದರೆ ದಾಳಿ ಮೊದಲೇ ಸಂಸ್ಥೆಯಲ್ಲಿನ ಕಂಪ್ಯೂಟರ್, ಲ್ಯಾಪ್ ಟಾಪ್ ಗಳನ್ನು ಸಿಬ್ಬಂದಿ ಬೇರೆಡೆ ಬಚ್ಚಿದ್ದಾರೆ. ದಾಳಿ ವೇಳೆ ಅನೇಕ ದಾಖಲಾತಿಗಳು ಲಭ್ಯವಾಗಿದೆದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಲಿಂಗಾಯತರ ಬಗ್ಗೆ ಏನೇನ್ ಭಾಷಣ ಮಾಡಿದ್ದಾರೆ ಎಲ್ಲಾ ದಾಖಲೆಗಳು ಈಗಲೂ ಲಭ್ಯವಿದೆ : ಸಚಿವ ಜೆ.ಸಿ ಮಧುಸ್ವಾಮಿ