Sunday, July 6, 2025

Latest Posts

ಅಕಾಲಿಕ ಮಳೆಯಿಂದ ಆತಂಕದಲ್ಲಿರುವ ಕಾಫಿ ಬೆಳೆಗಾರರು

- Advertisement -

ಹಾಸನ: ಮಲೆನಾಡಿನ ಪ್ರಮುಖ‌ ಬೆಳೆ ಅಂದರೆ ಅದು ಕಾಫಿ, ಕಾಫಿಬೆಳೆಯನ್ನೇ ನಂಬಿಕೊಂಡು ಲಕ್ಷಾಂತರ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಈ ಭಾರಿ ಹೆಚ್ಚು ಮಳೆಯಿಂದ ಕಾಫಿ ಹೂ ಉದುರಿಹೋಗಿತ್ತು, ಇದೀಗ ಕೊಯ್ಲಿಗೆ ಬಂದಿರೋ ಕಾಫಿಗೂ ಅದೇ ವರುಣನ ಕಂಟಕ ಎದುರಾಗಿದೆ. ಕಳೆದ ಮೂರು ದಿನಗಳಿಂದ ಮಲೆನಾಡು ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಳಿದುಳುದಿರೋ ಕಾಫಿಯೂ ನೆಲಕಚ್ಚಿದೆ. ಅಕಾಲಿಕ ಮಳೆಯಿಂದ ಕಂಗಾಲಾಗಿರೋ ಬೆಳೆಗಾರರು, ಯಾಕಾದರೂ ಮಳೆ ಬರುತ್ತಿದೆ ಅಂತಿದ್ದಾರೆ.

ರಟ್ಟಿನ ಡಬ್ಬಿಯಲ್ಲಿಟ್ಟಿದ್ದ ಹಸುಗೂಸನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ

ಅಕಾಲಿಕ ಮಳೆಯಿಂದ  ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಕೊಯ್ದಿರುವ ಕಾಫಿಬೀಜ ಒಣಗಿಸಲು ಪರದಾಡುತ್ತಿರುವ ಮಲೆನಾಡಿಗರು.. ಕಾಡಾನೆಯಿಂದ ಬೆಳೆ ಕೆಳೆದುಕೊಳ್ಳುತ್ತಿದ್ದ ಬೆಳೆಗಾರರಿಗೆ ಮಳೆಯೂ ಕಾಟವನ್ನು ಕೊಡುತ್ತಿದೆ. ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳು ಕಾಫಿ ಕಟಾವಿನ ಸಮಯ. ಈ ಸಮಯದಲ್ಲಿ ಮಳೆಯಾಗುತ್ತಿರುವುದರಿಂದ ಕೊಯ್ಲಿಗೆ ಬಂದಿರೋ ಕಾಫಿ ಗಿಡದಿಂದ ಉದುರುತ್ತಿದೆ.

ಇದಷ್ಟೇ ಅಲ್ಲದೆ, ಕೊಯ್ದಿರುವ ಕಾಫಿ ಬೀಜವನ್ನ ಒಣಗಿಸಲು ರೈತರು ಪರದಾಡುವಂತಾಗಿದೆ. ನಾಲ್ಕೈದು ದಿನದಿಂದ ಮಲೆನಾಡು ಭಾಗದಲ್ಲಿ ಮಳೆಯಾಗುವುದರ ಜೊತೆಗೆ ಮೋಡಕವಿದ ವಾತಾವರಣವಿದೆ. ಇದರಿಂದ ಈಗಾಗಲೇ ಕೊಯ್ದಿರೋ ಕಾಫಿ ಬೀಜವನ್ನೂ ಒಣಗಿಸಲು ಸಾಧ್ಯವಾಗ್ತಿಲ್ಲ.‌ ಈಗಾಗಲೇ ಕಾಡಾನೆಗಳ ಹಿಂಡು ಹಿಂಡಿನ ದಾಳಿಯಿಂದ ನೊಂದಿದ್ದ ಬೆಳೆಗಾರರಿಗೆ, ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೆಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಿ, ಸೂಕ್ತ ಪರಿಹಾರವನ್ನ ಒದಗಿಸಿಕೊಡಬೇಕೆಂದು ರೈತರು ಒತ್ತಾಯ ಮಾಡುತ್ತಿದ್ದಾರೆ.

ಅಕಾಲಿಕ ಮಳೆಯಿಂದ ಕಾಫಿ ಬೆಳೆಯ ಜೊತೆಗೆ ಇನ್ನಿತರೆ ಬೆಳೆಗೂ ಹಾನಿಯಾಗಿದೆ. ಹಾಸನ ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಬೆಳೆಯೋ ರಾಗಿಗೂ ಕೊಯ್ಲಿಗೂ ಅಕಾಲಿಕ ಮಳೆ ಹೊಡೆತವನ್ನ ಕೊಟ್ಟಿದೆ. ಈ ಬಾರಿ ಸತತವಾದ ಮಳೆಯಿಂದಾಗಿ ಶೇಕಡಾ 50 ರಷ್ಟು ಜನ ರಾಗಿಯನ್ನೇ ಭಿತ್ತನೆ ಮಾಡಿಲ್ಲ, ಈಗ ಊಳಿದಿರೋ 50 % ರಾಗಿಯನ್ನೂ ವರುಣ ಅಕಾಲಿಕವಾಗಿ ಬಂದು‌ ನಾಶ ಮಾಡೋಕೆ ಮುಂದಾಗಿರೋದು ರೈತರನ್ನ ಚಿಂತಿಗೀಡು ಮಾಡಿರೋದಂತೂ ಸುಳ್ಳಲ್ಲ.

ನಾರದರಿಂದ ಶ್ರೀವಿಷ್ಣು ಮಾಡಿದ ಅವಮಾನಕ್ಕೆ ಸಿಕ್ಕ ಶಾಪವೆಂಥದ್ದು ಗೊತ್ತೇ..?

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ : ಪತಿಯೇ ಕೊಂದಿರುವ ಶಂಕೆ

- Advertisement -

Latest Posts

Don't Miss