Friday, July 4, 2025

Latest Posts

ಹಲವು ದಿನಗಳಿಂದ ದನಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೆರೆ

- Advertisement -

ಹಾಸನ: ಹೊಳೆನರಸೀಪುರದಲ್ಲಿ ಕಳೆದ ಹಲವು ದಿನಗಳಿಂದ ದನಕರುಗಳ ಮೇಲೆ ಚಿರತೆಯೊಂದು ದಾಳಿ ಮಾಡುತ್ತಿತ್ತು. ಈಗ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಕಾಮೇನಹಳ್ಳಿ ಗ್ರಾಮದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಇದೀಗ ಹಗುರುವಾದಂತಿದೆ. ದಿನ ನಿತ್ಯ ದನಕರು ಹಾಗೂ ಕುರಿಗಳೊಂದಿಗೆ ಮೇಯಿಸಲು ಬೆಟ್ಟದ ಸಾಲಿಗೆ ತೆರಳುತ್ತಿದ್ದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿತ್ತು ,5 ಕ್ಕೂ ಹೆಚ್ಚು ದನ ಕರುಗಳ ಮೇಲೆ ದಾಳಿ ನಡೆಸಿ ಚಿರತೆಯಿಂದ ಸಾಗಾಣಿಕೆದಾರನಿಗೆ ನಷ್ಟ ಉಂಟಾಗುತ್ತಿತ್ತು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಕಳೆದ ರಾತ್ರಿಯಿಂದ ಕಾರ್ಯಾಚರಣೆ ನಡೆಸಿ ತಡರಾತ್ರಿ 3 ಗಂಟೆ ಸಮಯದಲ್ಲಿ ಚಿರತೆಯನ್ನು ಸೆರೆ  ಹಿಡಿಯಲಾಗಿದೆ. ಅರಣ್ಯ ಇಲಾಖೆಯ ಕಾರ್ಯ ಯಶಸ್ವಿಯಾಗಿದ್ದು, ಚಿರತೆಯನ್ನು ಬಂದಿಸಿರುವುದನ್ನು ನೋಡಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ರೆಬಲ್ ಪುತ್ರ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ

ಮಾಂಡೌಸ್ ಚಂಡಮಾರುತದಿಂದ ರಾಜ್ಯದ ಹಲವೆಡೆ ಮಳೆಯಾವಗುವ ಸಾಧ್ಯತೆ

‘ನಾನ್ ಕೆಲ್ಸಾ ಮಾಡಿದೀನಿ ಅಂದ್ಮೇಲೆ ನೀವು ನನಗೆ ಕೂಲಿ ಕೊಡ್ಬೇಕು’

- Advertisement -

Latest Posts

Don't Miss