- Advertisement -
ಭೋಪಾಲ್: ತೃತೀಯ ಲಿಂಗಿಗಳು ಸಮಾನತೆಯನ್ನು ಪಡೆಯಲು ಸರ್ಕಾರವು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಸಮಾಜದಲ್ಲಿ ತೃತೀಯಲಿಂಗಿಗಳಿಗೆ ಕಾನೂನು ಬದ್ಧ ಹಕ್ಕುಗಳನ್ನು ನೀಡಲಾಗಿದೆ. ಆದರೆ ಅವರು ಏನನ್ನಾದರೂ ಸಾಧಿಸಲು, ಸಮಾಜದಲ್ಲಿ ಸಮಾನತೆ ಪಡೆಯಲು ಸಾಧ್ಯವಾಗಿಲ್ಲ ಎಂದು ಮೊದಲ ತೃತೀಯ ಲಿಂಗಿ ಸಮುದಾಯದ ನ್ಯಾಯಾಧೀಶರಾದ ಜೋಯಿತಾ ಮೊಂಡಲ್ ಅವರು ಹೇಳಿದ್ದಾರೆ.
ಬಿಜೆಪಿ ವಕ್ತಾರ ರಾಜ್ಯವರ್ಧನ್ ಸಿಂಗ್ ರಾಹುಲ್ ಗಾಂಧಿಗೆ ತಿರುಗೇಟು
ಅವರಿಗೆ ಸಮಾಜದ್ಲಲಿ ಸಮಾನತೆ ನೀಡಲು ಸರ್ಕಾರ ಜಾಗೃತಿ ಕಾರ್ಯಕ್ರಮ ನಡೆಸುವುದರ ಜೊತೆಗೆ ಅವರ ಹಕ್ಕುಗಳನ್ನು ಮನವರಿಕೆ ಮಾಡಿಸಬೇಕು. ಇದರಿಂದ ಸಮಾಜದಲ್ಲಿರುವ ಇತರರಿಗೂ ನಮ್ಮ ಬಗ್ಗೆ ಒಳ್ಳೆ ಭಾವನೆ ಬರುತ್ತದೆ. ಇದಕ್ಕಾಗಿ ಮಂಡಳಿ ರಚನೆಯಾಗಬೇಕು ಎಂದು ಹೇಳಿದರು.
- Advertisement -

