Wednesday, June 18, 2025

Latest Posts

ಪ್ರಾಣಿ ಪಾಲಿಟಿಕ್ಸ್

- Advertisement -

ಇನ್ನು  ಭಾಷಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯವರಿಗೆ ಕೆಟ್ಟ ಮಾತುಗಳಿಂದ ನಿಂದಿಸಿರುತ್ತಾರೆ. ಪ್ರತಿ ಭಾಷಣದಲ್ಲೂ ನಿಮಗೆ ದಮ್ ಇದ್ರೆ ತಾಕತ್ ಇದ್ರೆ ಅಂತ ಭಾಷಣ ಮಾಡುವ ಬೊಮ್ಮಾಯಿಯವರೆ
ಪ್ರಧಾನಮಂತ್ರಿಯವರ ಮುಂದೆ ನಾಯಿಮರ ತರ ಬಾಲ ಅಲ್ಲಾಡಿಸುತ್ತೀರಾ ಅವರ ಮುಂದೆ ಗಡಗಡ ಅಂತ ನಡುಗುತ್ತೀರಾ ಎಂದು ಸಿದ್ದರಾಮಯ್ಯನವರು ಹೇಳಿರುವ ಮಾತು ಇಂದು ಬಿಜೆಪಿ ಪಾಳಯದಲ್ಲಿ ಬುಗಿಳೇಲುವಂತೆ ಮಾಡಿದೆ.
ಈ ಮಾತಿನಿಂದ ಆಕ್ರೋಶಗೊಂಡ ಬಿಜೆಪಿ ನಾಯಕರು ಸಿದ್ದರಾಮಯ್ಯನವರ ವಿರುದ್ದ ವಾಗ್ವಾದ ನಡೆಸುತ್ತಿದ್ದಾರೆ. ಕಂದಾಯ ಸಚಿವರಾದ ಆರ್ ಅಶೋಕ್ . ವಸತಿ ಸಚಿವ ವಿ ಸೋಮಣ್ಣ. ,ಸಿ, ಟಿ ರವಿ ಮತ್ತು ಇತ್ಯಾದಿ ನಾಯಕರು ಸಿದ್ದರಾಮಯ್ಯö್ನವರಿಗೆ ಈ ಮಾತು ಹೇಳಿರುವುದು ತಪ್ಪು ಅವರು ಬಿಜೆಪಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ ನಮ್ಮ ನಿಮ್ಮೇಲ್ಲರಿಗೂ ಸೇರಿ ಇಡಿ ರಾಜ್ಯಕ್ಕೆ ಮುಖ್ಯಮಂತ್ರಿ . ನೀವು ಸಹ ರಾಜಕೀಯದಲ್ಲಿ ತುಂಬಾ ಅನುಭವವನ್ನು ಹೊಂದಿದವರು . ಹಾಗೆಯೇ ಮುಖ್ಯಮಂತ್ತಿಯೂ ಆದವರು ನೀವು ಈ ರೀತಿ ಮಾತನಾಡಿರುವುದು ತಪ್ಪು . ಕೀಳು ಪದ ಬಳಕೆ ಮಾಡುವುದು ನಿಮ್ಮ ಸ್ಥಾನಕ್ಕೆ ಗೌರವ ತರುವಂತದಲ್ಲ ಈ ರೀತಿ ಪದ ಬಳಕೆ ಮಾಡುವುದರಿಂದ ಕಾಂಗ್ರೇಸ್ ಸಂಸ್ಕೃತಿ ತೋರಿಸುತ್ತೀರಿ . ಎಂದು ಅರ್ ಅಶೋಕ್ ಹೇಳಿದರು.

ಇನ್ನು ಸಿ ಎಂ ಬೊಮ್ಮಾಯಿಯವರು ಸಿದ್ದರಾಮಯ್ಯನವರ ಹೇಳಿಕೆಗೆ ಈ ರೀತಿಯಾಗಿ ಉತ್ತರವನ್ನು ಕೊಟ್ಟಿರುತ್ತಾರೆ.
ಅವರು ಇತ್ತೀಚಿನ ದಿನಗಳಲ್ಲಿ ಈ ರೀತಿ ಮಾತಾಡುವುದನ್ನ ರೂಡಿಮಾಡಿಕೊಂಡಿದ್ದಾರೆ. ಅವರ ಮಾತಿಗೆ ತಳ ಬುಡ ಯಾವುದೇ ಇರುವುದಿಲ್ಲ. ಇನ್ನು ಅವರು ಬಳಸಿರುವ ನಾಯಿ ಎಂಬುದು ಏನಿದೆಯಲ್ವ ಅದು ನಾಯಿ ತುಂಬಾ ನಿಯತ್ತಿನ ಪ್ರಾಣಿ .ಅವರು ಹೇಳಿದ ಹಾಗೆ ನಾನು ಜನರಿಗೆ ನಿಯತ್ತಾಗಿರುತೇನೆ . ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡುವುದರ ಮೂಲಕ ಅವರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ. ಹೊರತು ಅವರ ರೀತಿ ಸುಳ್ಳು ಹೇಳುವಂತಹದ್ದು, ಸಮಾಜ ಒಡೆಯುವ ಕೆಲಸ , ಸೌಭಾಗ್ಯಗಳನ್ನು ಕೊಡಿತ್ತೇನೆಂದು ದೌರ್ಭಾಗ್ಯ ಕೊಡುವಂತಹದ್ದು ನಾವು ಯಾವತ್ತು ಮಾಡಿಲ್ಲ ಎಂದು ತಿರುಗೇಟು ಕೊಟ್ಟರು.

‘ಜನಾರ್ಧನ ರೆಡ್ಡಿ ಕಟ್ಟಿದ ಹೊಸ ಪಕ್ಷ ಹೆಚ್ಚು ದಿನ ಅಸ್ತಿತ್ವದಲ್ಲಿರುವುದಿಲ್ಲ’

 

ಜೆಡಿಎಸ್ ಅಧ್ಯಕ್ಷರ ಹುಟ್ಟಿದ ಹಬ್ಬದಲ್ಲಿ ಸೇಬಿಗಾಗಿ ಮುಗಿಬಿದ್ದ ಜನ..

ಹಳೇ ಮೈಸೂರು ಭಾಗದಲ್ಲೂ ಬಿಜೆಪಿ ಪ್ರಾಬಲ್ಯ ಸಾಧಿಸಲಿದೆ: ಗೌತಮ್ ಮರಿಲಿಂಗೇಗೌಡ

 

- Advertisement -

Latest Posts

Don't Miss