Mandya news:
ಶ್ರೀರಂಗಪಟ್ಟಣದಲ್ಲಿ ರಂಗನಾಥ ದೇಗುಲಕ್ಕೆ ಸಚಿವ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಕೆ ಬಳಿಕ ಶ್ರೀರಂಗಪಟ್ಟಣದಲ್ಲಿ ಕಾರ್ಯಕರ್ತರ ಬೈಕ್ ರ್ಯಾಲಿಗೆ ಚಾಲನೆಯಾಗಿದೆ. ಬೈಕ್ ರ್ಯಾಲಿಯಲ್ಲಿ ಶ್ರೀರಂಗಪಟ್ಟಣಣದಲ್ಲಿ ಮೆರವಣಿಗೆ ಮಾಡಿದ್ದಾರೆಮುಂದಿನ ತಿಂಗಳು ಮಂಡ್ಯ ಜಿಲ್ಲೆಗೆ ಮೋದಿ ಕರೆಸಿ ಸಭೆ ಮಾಡಿಸಲು ಯೋಚಿಸಿದ್ದೇವೆ, ನೂತನ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉಧ್ಘಾಟನೆ ದಿನ ಮೋದಿ ಬರ್ತಾರೆ. ಈಗಾಗಲೇ ಈ ಬಗ್ಗೆ ಸಂಬಂಧಿಸಿದ ಸಚಿವರ ಜೊತೆ ಮಾತುಕತೆ ಆಗಿದೆ, ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರ ಒಲವಿದೆ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಬಲ ತುಂಬಲು ಬಂದಿದ್ದೇನೆ. ಸಂಸದೆ ಸುಮಲತಾ ಪಕ್ಷಕ್ಕೆ ಬರುವ ವಿಚಾರ ಈಗಾಗಲೇ ಈ ಬಗ್ಗೆ ಮಾತುಕತೆ ಆಗಿದೆ, ಅವ್ರು ಕೂಡ ನಮ್ಮ ಸಂಪರ್ಕದಲ್ಲಿ ಇದ್ದಾರೆ ನಿರ್ಧಾರ ಅವರಿಗೆ ಬಿಟ್ಟಿದ್ದು.ಚುನಾವಣೆಗಾಗಿ ರಾಜಕೀಯ ಬದಲಾವಣೆ ತರುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.ಇನ್ನು, ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳನ್ನು ನೋಡಿ ಜನರು ಬೇಸರಗೊಂಡಿದ್ದಾರೆ. ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ತಮ್ಮೇಶ್ ಗೌಡರ ನೇತೃತ್ವದಲ್ಲಿ ಅದ್ದೂರಿಯಾದ ಬ್ಯಾಟರಾಯನಪುರ ಶ್ರೀನಿವಾಸ ಕಲ್ಯಾಣೋತ್ಸವ

