ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ !

state news

ಮಂಡ್ಯ(ಮಾ.1): ಬಿಜೆಪಿ ಕಾರ್ಯಕರ್ತರ ಸಭೆ ಮಂಡ್ಯದಲ್ಲಿ ಬಿಜೆಪಿ ಗದ್ದುಗೆಗಾಗಿ ಕಸರತ್ತು ನಡೆದಿದೆ. ಮಂಡ್ಯ ನಗರದ ಹೊಸಹಳ್ಳಿಯ ಖಾಸಗಿ ಸಮುದಾಯ ಭವನದಲ್ಲಿ ಸಭೆ ನಡೆದಿದೆ. ಮಂಡ್ಯ ಟಿಕೆಟ್ ಆಕಾಂಕ್ಷಿ ಅಶೋಕ್ ಜಯರಾಮ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ದೀಪ ಬೆಳಗುವ ಮೂಲಕ ಸಭೆಗೆ ಚಾಲನೆ ಕೊಡಲಾಯಿತು.  ಈ ವೇಳೆ ಬಿಜೆಪಿಗೆ ಹಲವರು ಸೇರ್ಪಡೆಯಾಗಿದ್ದು, ಸಭೆಯಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದಾರೆ.

ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ಶುರುವಾಗಲಿದೆ. ಹೀಗಾಗಿ ಎಲ್ಲಾ ಪಕ್ಷಗಳಲ್ಲೂ ತೀವ್ರತರವಾದ ಪೈಪೋಟಿ ನಡೆಯುತ್ತಿದ್ದು, ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಚುನಾವಣಾ ಹವಾ ಇನ್ನೂ ಜೋರಾಗಲಿದೆ ಎನ್ನುವುದು ಸತ್ಯ.

ಬಿಜೆಪಿ ಭ್ರಷ್ಟಾಚಾರದ ಹಣೆಪಟ್ಟಿ ಕಟ್ಟಿಕೊಂಡಿದೆ; ಡಿಕೆಶಿ

ಬಿಜೆಪಿ ಸೇರ್ತಾರಾ ಭಾಸ್ಕರ್ ರಾವ್..?! ಕುತೂಹಲ ಮೂಡಿಸಿದ ಭೇಟಿ..!

About The Author