Thursday, June 19, 2025

Latest Posts

ಅಭ್ಯರ್ಥಿಗಳ 2 ನೆ ಪಟ್ಟಿ ಬಿಡುಗಡೆ ಸವಾಲು ಎದುರಿಸುತ್ತಿರುವ ಕಾಂಗ್ರೆಸ್ ನಾಯಕರು

- Advertisement -

political news:

124 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಲಿಸ್ಟ್ ಅನೌನ್ಸ್ ಮಾಡಿರೋ ಕಾಂಗ್ರೆಸ್‌ಗೆ ಇದೀಗ, 2ನೇ ಪಟ್ಟಿ ಸವಾಲಿನ ಸಂಗತಿಯಾಗಿದೆ. ಎರಡನೇ ಲಿಸ್ಟ್‌ಗಾಗಿ ನಡೆದ ಮೀಟಿಂಗ್‌ನಲ್ಲಿ ಸುದೀರ್ಘ ಚರ್ಚೆಯಾದ್ರೂ ಒಮ್ಮತದ ನಿರ್ಧಾರ ಇನ್ನೂ ಮೂಡಿಲ್ಲ. ಉಳಿದ 100 ಕ್ಷೇತ್ರಗಳಲ್ಲಿ ಸುಮಾರು 60 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಯಾವುದೇ ಗೊಂದಲ ಇಲ್ಲ. ಉಳಿದ 40 ಕ್ಷೇತ್ರಗಳಲ್ಲಿ ಬಣಬಡಿದಾಟ ಎದುರಿಸಬೇಕಾದ ಪರಿಸ್ಥಿತಿ ಇದೆ. ಹಾಸನ, ಮೈಸೂರು, ಕಲಬುರಗಿ, ಬೆಳಗಾವಿಯ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲ ಗೂಡಾಗಿದೆ. ಹಾಸನದಲ್ಲಿ ಹೊಳೆನರಸೀಪುರ, ಸಕಲೇಶಪುರ ಬಿಟ್ರೆ ಉಳಿದ 5 ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ಅನ್ನೋದು ಸ್ಪಷ್ಟವಾಗುತ್ತಿಲ್ಲ. ಅದ್ರಲ್ಲೂ ಅರಕಲಗೂಡು, ಬೇಲೂರು, ಶ್ರವಣಬೆಳಗೊಳದಲ್ಲಿ ತುಂಬಾನೆ ಗೊಂದಲ ಸೃಷ್ಟಿಯಾಗಿದೆ. ಇನ್ನೂ ಹಾಸನ, ಸಕಲೇಶಪುರದಲ್ಲೂ ಟಿಕೆಟ್‌ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೈಸೂರಿನ ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜದ ಟಿಕೆಟ್ ಯಾರಿಗೆ ಅನ್ನೋದು ತಿಳಿಯುತ್ತಿಲ್ಲ. ಕಲಬುರಗಿಯ ಅಫಜಲಪುರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮೀಣ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಿಲ್ಲ. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಿಗೆ ಮಾತ್ರ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾಗಿದೆ. ಉಳಿದ 9 ಕ್ಷೇತ್ರಗಳಿಗಾಗಿ ಟಿಕೆಟ್ ಫೈಟ್ ನಡೆಯುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಬಣ ಮತ್ತು ಡಿಕೆ ಶಿವಕುಮಾರ್ ಬಣದ ಬೆಂಬಲಿಗರ ನಡುವೆ ತೀವ್ರ ಪೈಪೋಟಿ ಇದೆ.

ಒಳ ಮೀಸಾಲಾತಿ ವಿಚಾರದಲ್ಲಿ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ, ಪ್ರತಿಭಟನಾಕಾರರಿಂದ ಪೋಲಿಸರಿಗೆ ಸಣ್ಣ ಪುಟ್ಟ ಗಾಯಗಳು

ಚುನಾವಣಾ ಸಮಯದಲ್ಲಿ ದಾಖಲೆ ರಹಿತ ವಸ್ತು ಮತ್ತು ಹಣ ರವಾನೆಗೆ ಮುಂದಾದರೆ ಹುಷಾರ್ ಪೋಲಿಸರ ಕಣ್ಣು ನಿಮ್ಮ ಮೇಲಿದೆ.

ಮುಳಬಾಗಿಲು ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ್ ಪ್ರಚಾರ

- Advertisement -

Latest Posts

Don't Miss