ಕೋಲಾರ :
ಬೆಂಗಳೂರು ಉತ್ತರ ವಿಶ್ವವಿಧ್ಯಾಲಯ ೩ ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆದಿದ್ದೂ ಈ ಘಟಿಕೋತ್ಸವವನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟನೆ ಮಾಡಿದರು ಕೋಲಾರ ನಗರದ ರಾಷ್ಟ್ರೀಯ ಹೇದ್ದಾರಿ ೭೫ ನಂದಿನಿ ಪ್ಯಾಲೇನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ,
ಕೋಲಾರದ ಸಂಚಿಕೆ ದಿನಪತ್ರಿಕೆ ಸಂಪಾದಕರಾದ ಮುನಿಯಪ್ಪ ಅವರಿಗೆ ಸಮಾಜಿಕ ಸೇವಾ ಕ್ಷೇತ್ರದಲ್ಲಿ ನೀಡಿದರೆ, ಹರೀಶ್ ಹಂದೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರ, ಮುನಿವೆಂಕಟಪ್ಪ ತಮಟೆ ವಾದದ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನಮಾಡಿ ಗೌರವಿಸಲಾಯಿತು.
ಹಾಗೆಯೆ ಪಿಜಿ ಮತ್ತು ಯುಜಿ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ೪೪ ವಿಧ್ಯಾರ್ಥಿಗಳಿಗೆ ರಾಜ್ಯಪಾಲರಿಂದ ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು. ಇನ್ನು ಈ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾನಿಕಯದ ಕುಲಪತಿಗಳಾ ನಿರಂಜನ್ ವಾನವಹಳ್ಳಿ, ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.