Mysore News: ಹೊಸಹಳ್ಳಿ ಗೇಟ್ ಬಳಿ ಸರ್ಕಾರಿ ಬಸ್ ಗಳು ಖಾಲಿ ಇದ್ದರೂ ವಿದ್ಯಾರ್ಥಿಗಳು ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತಿದ್ದರು ನಿಲ್ಲಿಸದೆ ಬಸ್ ಚಾಲಕರ ಬೇಜವಾಬ್ದಾರಿ ವರ್ತನೆಯನ್ನು ಕಂಡು ವಿದ್ಯಾರ್ಥಿಯರು ಮತ್ತುಕೂಲಿ ಕಾರ್ಮಿಕರು ಹೈರಾಣಗಿದಾರೆ. ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣ ಇದ್ದರು ಕೂಡ ಮಹಿಳೆಯರಿಗೆ ಬಸ್ ನಿಲ್ಲಿಸದೆ ಚಾಲಕರು ದುರ್ವರ್ತನೆ ಮೆರೆಯುತ್ತಿದ್ದಾರೆ.
ನಿರ್ಲಕ್ಷತೆ, ಉದಾಸೀನತೆಯಿಂದಾಗಿ ಶಾಲೆ ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ತುಂಬಾ ತೊಂದರೆಯಾಗುತ್ತಿದೆ. ವಿಧಿ ಇಲ್ಲದೆ ಖಾಸಗಿ ಆಟೋಗಳಿಗೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ತರ್ದಲೆ ಬಸ್ ಚಾಲಕ ಖಾಲಿ ಇದ್ದರೂ ನಿಲ್ಲಿಸದೆ ಹೋಗಿದ್ದಾನೆ ಅವನ ವಿರುದ್ಧ ಕ್ರಮ ಕೈಗೊಳ್ಳಬೇಕು, ಒಬ್ಬ ಚಾಲಕನ ಮೇಲೆ ಶಿಸ್ತು ಕ್ರಮ ಕೈಗೊಂಡರೆ ಇನ್ನೊಬ್ಬ ಚಾಲಕ ಇಂಥ ಘಟನೆ ಮರುಕಳಿಸಿದಂತೆ ಎಚ್ಚರವಹಿಸುತ್ತಾನೆ. ಈ ಬಗ್ಗೆ ನಂಜನಗೂಡಿನ ಘಟಕ ವ್ಯವಸ್ಥಾಪಕರಿಗೂ ಮಾಹಿತಿಯನ್ನು ನೀಡಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ವಿದ್ಯಾರ್ಥಿಯರು ಮತ್ತು ಕೂಲಿ ಕಾರ್ಮಿಕರು ಕರ್ನಾಟಕ ಟಿವಿಗೆ ತಿಳಿಸಿದ್ದಾರೆ.
ವರದಿ :- ಹರೀಶ್ ನಂಜನಗೂಡು
14ನೇ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದುಗೆ ಸ್ಪೆಷಲ್ ಗಿಫ್ಟ್..! ಯಾರಿಂದ ಗೊತ್ತಾ..?!