ದೇವದುರ್ಗ:ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೋತಿಗಳು ನೀರು ಕುಟಿಯಲು ಹೋಗಿ ಸತ್ತು ಹೋಗಿವೆ.ಕಲುಷಿತ ನೀರು ಸೇವಿಸಿದ ಗ್ರಾಮಸ್ಥರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಧಿಕಾರಿಗಳಿ ಮತ್ತು ವಾಟರ್ ಮ್ಯಾನ್ ಗಳ ನಿರ್ಲಕ್ಷದಿಂದಾಗಿ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರಿಂದ ಆರೋಪ ಮಾಡಲಾಗಿದೆ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೆ ಹೇಮನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕರ್ ನ ಮೇಲೆ ಮುಚ್ಚಳ ಇಲ್ಲದ ಕಾರಣ ಪಕ್ಕದಲ್ಲಿದ್ದ ಮರದಲ್ಲಿ ವಾಸವಾಗಿರುವ ಕೋತಿಗಳು ಟ್ಯಾಂಕರ್ ನಲ್ಲಿರುವ ನೀರನ್ನು ಕುಡಿಯಲು ಹೋಗಿ ಟ್ಯಾಂಕರ್ ನಲ್ಲಿ ಬಿದ್ದು ಕೆಲವು ದಿನಗಳ ಹಿಂದೆಯೇ ಸತ್ತು ಹೋಗಿವೆ.
ಜನರು ನೀರು ಕುಡಿಯುವಾಗ ಬಂದಂತಹ ದುರ್ವಾಸನೆ ಕಂಡು ಅನುಮಾನಗೊಂಡು ಟ್ಯಾಂಕ್ ಹತ್ತಿ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.ನಂತರ ಸತ್ತಿರುವ ಕೋತಿಗಳನ್ನು ಹೊರತೆಗೆದು ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ದಾವಿಸಿದ ಜಿಲ್ಲಾ ಪಂಚಾಯತ್ ಸಿಇಓ ಶಶಿದರ್ ಕುರೇರ್ ಗ್ರಾಮಕ್ಕೆ ಆಗಮಿಸಿ ಪರಿಶಿಲನೆ ನಡೆಸಿ ತಕ್ಷಣವೇ ಟ್ಯಾಂಕರ್ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಬ್ಲೀಚಿಂಗ್ ಪೌಡರ್ ಹಾಕಿ ತೊಳೆಯಬೇಕು ನಂತರ ನೀರನ್ನು ತುಂಬಿಸಬೇಕು ಎಂದು ಹೇಳಿದರು ಅಲ್ಲಿಯವರೆಗೂ ಪರ್ಯಾಯವಾಗಿ ಗ್ರಾಮಸ್ಥರಿಗೆ ಕುಡಿಯಲು ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕೆಂದು ಆದೇಶಿಸಿದರು.
ಯಾವ ಜೈಲಿನಲ್ಲಿ ಬ್ರಿಟೀಷರು ಸ್ವಾತಂತ್ರ ಹೋರಾಟಗಾರರನ್ನು ಬಂದಿಸಿ ಇಡುತಿದ್ದರು ?